ತ್ವಂ ಶಾರದಂ

ತ್ವಂ ಶಾರದಂ

(ರಾಗ ಕಾಂಭೋಜ ಆದಿತಾಳ) ತ್ವಂ ಶಾರದಂ ||ಪ|| ಒಂದೆಂಟು ಲೆಕ್ಕದ ದ್ವಾರ, ಅದು ಒಂದು ದಿನ ತೊಳೆಯದಿದ್ದರೆ ವಿಕಾರ , ಸಂದು- ಸಂದಿಲಿ ಕ್ರಿಮಿರಾಶಿ ಘೋರ , ಅದು ಶುಕ್ಲ ಶೋಣಿತ ಸಂಬಂಧ ಶರೀರ || ಕಣ್ಣಿಂದ ಸಿಕ್ಕು ಸೋರುವ್ಯ್ದು , ಮೂಗು ಕಣ್ಣಿಂದ ಶ್ಲೇಷ್ಮ ತೋರುವುದು , ಅದು ಉಣದಿದ್ದರೆ ಎಂಜಲಹುದು , ನಿನ್ನ ಪ್ರಾಣ ಬಿಟ್ಟರೆ ದುರ್ಗಂಧ ನಾರುವುದು || ಕಣ್ಣ ಮುಚ್ಚಿ ಕಣ್ಣ ತೆರೆವ , ಅವ ಬಣ್ಣಬಣ್ಣದ ತತ್ವನೊರೆವ , ಪರ- ಹೆಣ್ಣಿಗಾಗಿ ತಾನು ಜರೆವ , ಒಳ್ಳೆ ಪುಣ್ಯವಂತನ ನೋಡಿ ತನ್ನೊಳಗೆ ತಾನು ಬೆರೆವ || ಮಾತಿನಲ್ಲಿ ಹರಿದಾಸ , ಅವ ನೀತಿಯಲ್ಲಿ ಬ್ರಹ್ಮರಾಕ್ಷಸ , ಅವ ಭೀತಿಯಿಲ್ಲದೆ ಬ್ರಹ್ಮದ್ವೇಷ ಮಾಡಿ ಸಾತ್ವಿಕನೆನಿಸುವುದು ಪರಿಹಾಸ || ವೈದಿಕ ವೃತ್ತಿಯನೆ ಎತ್ತಿ , ಅವ ಓದನಕೆ ಮನೆಮನೆಯ ಸುತ್ತಿ , ಅತಿ- ಮೋದದಲಿ ಸತಿಯೊಡನೆ ಮುತ್ತಿ , ಬಲು ಬಾಧಿಸುತ ಅವನೋದನವೊತ್ತಿ || * ಪುರಾಣಿಕನಾಗಿ ಪುಟ್ಟಿ , ಅವ ತರತರದ ಬೋಳೇರ ಕೂಟವ ಕಟ್ಟಿ , ಬಹು ಜ- ನರಲ್ಲಿ ಪಿಟಿಪಿಟಿಗುಟ್ಟಿ , ಹಣ ಬಾರದೊ ಬಾಹೊದೊ ಎಂಬಲ್ಲಿ ದೃಷ್ಟಿ || ವ್ಯಾಪಾರಿ ತನು ಎಂದೆನಿಸಿ , ..... ಭೂಪತಿ ಸೇವೆ ಅಂಗೀಕರಿಸಿ , ಆ- ಪಾಪದ ದ್ರವ್ಯ ಸತ್ಕರಿಸಿ , ವೇಶ್ಯ - ಸ್ತ್ರೀಪಾಲನೆ ಮಾಡಿ ಕೊನೆಯ ಸಮ್ಮತಿಸಿ || ಸಚ್ಛಾಸ್ತ್ರ ಶ್ರವಣವನೆ ಮಾಡಿ , ಗೋ- ವತ್ಸದಂತೆ ಗುರುಗಳ ಹಿಂದೆ ಓಡಿ , .... ಕುತ್ಸಿತರ ಸಂಗವೀಡಾಡಿ , ಮದ- ಮತ್ಸರ ತೊರೆದು ಹರಿದಾಸರೊಳಗಾಡಿ || ಅದ್ವೈತ ಮತಗಳನೆ ಜರೆದು , ಗುರು- ಮಧ್ವರಾಯರೆಂಬೊ ಬಿರುದು , ನಮ್ಮ ಮುದ್ದು ಪುರಂದರವಿಠಲನ್ನ ಅರಿದು , ಅವ ಶುದ್ಧಾತ್ಮನಾಗಿ ಸುಖದಲ್ಲಿರಬಹುದು || ====================== * ( ಇಲ್ಲಿ ಇರೋದು ವೊ - ವ್ + ಒ)
ದಾಸ ಸಾಹಿತ್ಯ ಪ್ರಕಾರ
ಬರೆದವರು