ತುಂಗೆ ಮಂಗಳತರಂಗೆ

ತುಂಗೆ ಮಂಗಳತರಂಗೆ

( ರಾಗ ಭೂಪಾಳಿ ಝಂಪೆ ತಾಳ) ತುಂಗೆ ಮಂಗಳತರಂಗೆ ||ಪ|| ಹರಿಯ ಸರ್ವಾಂಗೆ ಜಯ ಜಯತು ಜಯ ತುಂಗಭದ್ರೆ ||ಅ|| ಆದಿಯೊಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ ಛೇದಿಸುತಲವನ ಭೂಮಿಯನೆತ್ತಿ ಕಾಯ್ದಂಥ ಆದಿ ವರಾಹನ ದಾಡೆಗಳಿಂದ ಬಂದೆ || ಜಲವೆಲ್ಲ ಹರಿಮಯ ಶಿಲೆಯೆಲ್ಲ ಶಿವಮಯ ಮಳಲು ಮಿಟ್ಟೆಗಳೆಲ್ಲ ಮಣಿಯ ಮಯವು ಬೆಳದಿಪ್ಪ ದರ್ಭೆಗಳು ಸಾಕ್ಷಾತ್ತು ಬ್ರಹ್ಮಮಯ ನಳಿನನಾಳವು ಸರ್ವ ವಿಷ್ಣುಮಯವು || ಇದೇ ವೃಂದಾವನ ಇದೇ ಕ್ಷೀರಾಂಬುಧಿ ಇದೇ ವೈಕುಂಠಕೆ ಸರಿಯೆಂದೆನಿಸಿದೆ ಇದೇ ಬದರಿಕಾಶ್ರಮ ಇದೇ ವಾರಣಾಸಿಗೆ ಅಧಿಕ ಫಲವನ್ನೀವ ದೇವಿ || ಧರೆಗೆ ದಕ್ಷಿಣ ವಾರಣಾಸಿಯೆಂದೆನಿಸಿದೆ ಪರಮ ಪವಿತ್ರೆ ಪಾವನಚರಿತೆ ನಿನ್ನ ಸ್ಮರಣೆ ಮಾತ್ರದಿ ಕೋಟಿ ಜನ್ಮದಘವನು ಕಳೆವ ಪರಿದು ಸಾಯುಜ್ಯಫಲವೀವ ದೇವಿ || ಪರಮಭಕ್ತ ಪ್ರಹ್ಲಾದಗೊಲಿದು ಬಂದು ನರಸಿಂಹ ಕ್ಷೇತ್ರವೆಂದೆನಿಸಿ ಮೆರೆದೆ ಧರೆಯೊಳಧಿಕ ವರ ಕೂಡಲೀಪುರದಲ್ಲಿ ವರದಪುರಂದರವಿಟ್ಠಲನಿರಲು ಬಂದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು