ಕೆಟ್ಟೆನಲ್ಲೊ ಹರಿಯೆ

ಕೆಟ್ಟೆನಲ್ಲೊ ಹರಿಯೆ

( ರಾಗ ಭೈರವಿ ತ್ರಿಪುಟತಾಳ) ಕೆಟ್ಟೆನಲ್ಲೊ ಹರಿಯೆ , ಸಿಟ್ಟು ಮಾಡಿ ಎನ್ನಬಿಟ್ಟು ಕಳೆಯಬೇಡ ||ಪ|| ಬಂದೆನು ನಾನು ತಂದೆತಾಯಿಗಳುದರದಿ ಒಂದು ಅರಿಯದೆ ಬಾಲಕತನದೊಳು ಮುಂದುವರಿದ ಯೌವನದೊಳು ಸತಿಸುತ - ರಂದವ ನೋಡುತ್ತ ನಿನ್ನ ನಾಮವ ಮರೆತೆನು || ಸ್ನಾನಸಂಧ್ಯಾವಂದನೆ ಹೀನವಾಯಿತು ಬಹು- ಮಾನವಿಲ್ಲ್ಲದೆ ಕುಲಹೀನರಾಶ್ರಯದಿಂದ ಜ್ಞಾನಿಗಳೊಡನಾಟವಿಲ್ಲದೆ ಮನದೊಳು ದಾನಧರ್ಮದ ಬಟ್ಟೆಯೆಂತೆಂದು ಮರೆತೆನು || ಮೊದಲೆ ಬುದ್ಧಿವಿಹೀನನದರೊಳು ವೃದ್ಧಾಪ್ಯ ಕದನವು ದಶದಿಕ್ಕಿನುದಯದ ರಾಯರ ಎದೆನೀರು ಬತ್ತಿತು ಅದರಿಂದ ನಿನ್ನಯ ಪದಪದ್ಮಯುಗಳ ತುದಿಯ ನಾ ಮರೆತೆನು || ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು ಕಾಡೊಳಗಾಡುವ ಮೃಗದಂತೆ ಜೀವಿಸಿ ಗೂಡೊಳಗಿರುವ ಗೂಬೆಯ ತೆರದಂತೆ ಮಾಡದೆ ನಿನ್ನಯ ಸ್ಮರಣೆಯ ಮರೆತೆನು || ಬುದ್ಧಿಹೀನನು ನಾ ಉದ್ಧರಿಸೆಲೋ ದೇವ ಮುದ್ದು ಶ್ರೀ ಪುರಂದರವಿಠಲನೆನ್ನ ಬುದ್ಧಿಯೊಳಡಗಿಯೆ ತಿದ್ದಿಟ್ಟು ನಡೆಸಲು ಪೊದ್ದುವೆ ನಿನ್ನಯ ಚರಣಾರವಿಂದವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು