ಏನು ಬೇಡಲಿ ಹರಿಯ

ಏನು ಬೇಡಲಿ ಹರಿಯ

(ರಾಗ ಶಂಕರಾಭರಣ. ಅಟ ತಾಳ) ಏನು ಬೇಡಲಿ ಹರಿಯ ||ಪ|| ಜಾಹ್ನವೀಜನಕನ ಕಂದರ್ಪನಯ್ಯನ ||ಅ.ಪ|| ಏನು ಬೇಡಲಿ ಚಿತ್ತ ಚಂಚಲ ಕಠಿನನ ಮೌನದಿಂದಲಿ ಧರೆ ಕೋರೆಲೆತ್ತಿದನ, ಇಂಥವನ || ಕರುಳಹಾರದವನ ಧರಣಿಯನು ಮೆಟ್ಟಿ ಈರಡಿ ಮಾಡಿದ ಕೊಲೆಗಡುಕನ, ಇಂಥವನ || ಅರಣ್ಯದಿ ಚರಿಸಿ ಸತಿಯ ಕಳೆದನ ತಿರುಗಿ ಮನೆ ಮನೆಯ ಬೆಣ್ಣೆ ಮೆಲ್ಲುವನ, ಇಂಥವನ || ವಸನ ಶೂನ್ಯನಾಗಿ ಕಲ್ಕಿ ಏರಿದನ ಕಾಸು ಕಟ್ಟಿಟ್ಟು ಕೇಸಕ್ಕಿ ಉಂಬುವನ, ಇಂಥವನ || ಹಯವ ಪಿಡಿದು ಗಾಡಿಗಾರನಾಗಿಪ್ಪನ ಭಯದಿಂದ ಬಲಿಯ ಬಾಗಿಲ ಕಾಯಿದವನ, ಇಂಥವನ || ಪುರವ ಜರಾಸಂಧನಿಗಂಜಿ ಬಿಟ್ಟವನ ನೆರೆ ಸಾಧಿಸಿ ಮಾವನ ಶಿರವ ತರಿದನ, ಇಂಥವನ || ಜಗನ್ನಾಥ ಪುರಂದರ ವಿಠಲರಾಯನ ಭಕುತರಿಗೆ ಚತುರ್ಮುಕ್ತಿ ಕೊಡುವನ, ಇಂಥವನ |
ದಾಸ ಸಾಹಿತ್ಯ ಪ್ರಕಾರ
ಬರೆದವರು