ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ

ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ

(ಪಹಾಡಿ ರಾಗ ಕೇರವಾ ತಾಳ) ಅರ್ತುಕೊಳ್ಳಿರಯ್ಯ ನೀವು ಹರಿಯ ನಾಮಾಮೃತ ಗುರ್ತು ಮಾಡಿಕೊಡುವ ಪೂರ್ಣ ಸದ್ಗುರು ಸಮರ್ಥ ||ಧ್ರುವ|| ಒಳ್ಳೆ ಒಳ್ಳೆ ವರು ಬಂದು ಕೇಳಿರೋ ನೀವಿನ್ನು ತಿಳಿದುಕೊಳ್ಳಿ ಇದಕೆ ಬೀಳುವುದಿಲ್ಲಾ ಹಣಹೊನ್ನು ಉಳ್ಳ ಬುದ್ಧಿಯಿಂದ ನೀವು ತೆರೆದು ನೋಡಿ ಕಣ್ಣು ಕೊಳ್ಳಲರಿಯದವನ ಬಾಯಾಗ ಬೀಳುದು ಮಣ್ಣು ||೧|| ಬ್ರಹ್ಮಸುಖ ಇದೇ ಇದೇ ನೋಡಿರೋ ಸಾಕ್ಷಾತ ಸಮ್ಯಕ್ ಜ್ಞಾನ ಪ್ಯಾಟಿಯೊಳು ತುಂಬಿ ತುಳುಕುತ್ತ ಒಮ್ಮನ ಮಾಡಿಕೊಂಡು ಬಂದು ಕೊಳ್ಯಮೃತ ನೇಮದಿಂದ ಕೊಳ್ಳಲಿಕ್ಕೆ ದೋರುದು ಸ್ವಹಿತ ||೨|| ಇಹಪರ ಸಾರ್ಥಕಿದೆ ಕೇಳಿರೊ ನೀವೆಲ್ಲ ದೇಹ ಅಭಿಮಾನಿಗಿದು ಸಾಧ್ಯವಾಗುವುದಲ್ಲ ಸೋಹ್ಯವರಿತು ಸೂರೆಗೊಂಡ ಮಹಿಮ ತಾ ಬಲ್ಲ ಗುಹ್ಯವಾಕ್ಯ ತಿಳಿದು ನೋಡಿ ಮಹಿಪತಿ ಸೊಲ್ಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು