ಇತರೆ

ಪಟ್ಟಿಯಲ್ಲಿಲ್ಲದ ಬೇರೆ ದಾಸರ ರಚನೆಗಳಿಗೆ ಈ ಟ್ಯಾಗ್ ಹಾಕಬಹುದು

ಗಾಳಿಗಿಕ್ಕಿದ ದೀವಿಗೆಯಂತೆ ದೇಹ



ಗಾಳಿಗಿಕ್ಕಿದ ದೀವಿಗೆಯಂತೆ ದೇಹವೆಂದು
ವೇಳೆವೇಳೆಗೆ ಶ್ರುತಿ ಸ್ಮೃತಿ ಸಾರುತಲಿವೆ
ಹಾಳುಹರಟೆಯಿಂದ ಫಲವೇನು ಇಲ್ಲ
ನಾಲಿಗೆ ಇದ್ದು ನಾರಾಯಣೆನ್ನಬಾರದೆ
ಕಾಲಕಾಲಕೆ ಹರಿಯ ಕಲ್ಯಾಣಗುಣಗಳ
ಕೇಳದವನ ಜನ್ಮವ್ಯರ್ಥ ಶ್ರೀ ರಾಮಕೃಷ್ಣ
ಹಾಳುಹರಟೆಯಿಂದ ಫಲವೇನು ಇಲ್ಲ

----ಬಡೇಸಾಹೇಬರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ

ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ
ಗಳಿಸಿದಾಗಳಿಗೆ ಅಂತಃಕರಣದೊಳಗೆ ||ಧ್ರುವ||

ಗಳಿಸಿದೆನು  ಗುರುಕರುಣ, ಗಳಿಸಿದೆನು  ಗುರುಚರಣ
ಗಳಿಸಿದೆನು  ಗುರುಸ್ಮರಣ ಚಿಂತನಿಯನು ||೧||

ಗಳಿಸಿದೆನು ಗುರುಜ್ಞಾನ, ಗಳಿಸಿದೆನು  ಗುರುಮೋನ
ಗಳಿಸಿದೆನು   ಗುರುಜ್ಞಾನ ಧಾರಣವನು ||೨||

ಗಳಿಸಿದೆನು  ಇಳೆಯೊಳು ಮಹಿಪತಿ ಇಹಪರದೊಳು
ಸಾಯುಜ್ಯ ಸದ್ಗತಿಯ ಮುಕ್ತಿಗಳು ||೩||

--ಮಹಿಪತಿದಾಸರು






 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು

ಅಟ್ಟಮೇಲೆ ಒಲೆಯು ಉರಿವಂತೆ ಎನಗಿನ್ನು
ಕೆಟ್ಟ ಮೇಲೆ ಬುದ್ಧಿ ಬಂದಿತೀಗ
ಉದ್ದುಕನ್ನಡಿ ಮೇಲೆ ಉರುಳುವೋಲ್ ಷಡ್ವರ್ಗ
ಕೆದ್ದು ಬಿದ್ದೆನು ಬರಿಯ ಗರ್ವದಿಂದ
ಮರುಳಹಂಕಾರದಲಿ ಮಾಯಕ್ಕೆ ಸಿಲುಕಿನ್ನು
ಮರೆತುಬಿಟ್ಟೆನು ನಿನ್ನ ಮಹಿಮೆಯನ್ನು
ಜ್ಞಾನಸುಖ ಪರಿಪೂರ್ಣ ಏನು ಮಾಡಲು ಇನ್ನು
ಶ್ರೀನಿವಾಸನೆ ನಿನ್ನ ದಾಸ ನಾನು
ಸಾರಿದರ ಬಿಡನೆಂಬ ಬಿರುದನುಳುಹೊ
ಆರಿಗಾರಿಲ್ಲ ನೀನಿಲ್ಲದಿನ್ನು
ನೀರಿನೊಳಗದ್ದು ಕ್ಷೀರದೊಳಗದ್ದು
ಭಾರ ನಿನ್ನದು ಕಾಣೊ ಧೀರ ಶ್ರೀಕಾಂತ

--ದಾಸರ ಲಕ್ಷ್ಮೀನಾರಾಯಣರಾಯರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು


ಅಂದು ಶ್ರುತಿರಾಶಿಯನು ತಂದು ಕೊಟ್ಟವರಾರು
ಸಿಂಧುಮಥನದಿ ಸುಧೆಯನಿತ್ತವರಾರು
ನೊಂದು ಮುಳುಗಲು ವಸುಂಧರೆಯ ತಂದವರಾರು
ಕಂದ ಕರೆಯಲು ಬಂದ ಬಂಧುವಾರು
ಇಂದ್ರನೈಶ್ವರ್ಯವನು ತಂದು ಕೊಟ್ಟವರಾರು
ಮಂದನೃಪರನು ಕಾಡಿಕೊಂದವರಾರು
ಸುಂದರಾಂಗಿಯ ಸೆರೆಯ ಬಂದು ಬಿಡಿಸಿದರಾರು
ಕುಂದುಗಳನೆಣಿಸದೆ ಕಾವದಾರು
ನಂದಿನೇರಿದನಿಂಗೆ ಗೆಲುವಿತ್ತವರಾರು
ಬಂದ ಭಯಗಳನೆಲ್ಲ ಬಿಡಿಸುವರಾರು
ಮುಂದೆ ಮುಕ್ತಿಯನೀವ ಶಕ್ತ ಪ್ರಭುವಾರು
ತಂದೆ ಶ್ರೀಕಾಂತನಲ್ಲದೆ ಮತ್ತೆ ಯಾರು

--ದಾಸರ ಲಕ್ಷ್ಮೀನಾರಾಯಣರಾಯರು



ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪ್ರಮೇಯ ಆದರಿಸೋ ಎನ್ನ


ಅಪ್ರಮೇಯ  ಆದರಿಸೋ ಎನ್ನ ||ಪ||
ಸ್ವಪ್ರಕಾಶಾನಂದರೂಪನೆ ||ಅ||

ಮುಪ್ಪುರಹರನುತ ಮುನಿಜನಸೇವಿತ
ತಪ್ಪುಗಳೆಣಿಸದೆ ದಾಸನೆಂತೆಂದು ||೧||

ನಿನ್ನದರುಶನದಿಂದಾ ಧನ್ಯರಾಗುವರು  ಜನರು
ಪುಣ್ಯವಂತರಾಗಿಹವರನ ಪಡೆವರು ||೨||

ಧಾರುಣಿಯೊಳಗೆ ಮಳೂರೊಳು ನೆಲಸಿದೆ
ಮಾರಜನಕ ಗುರುರಾಮವಿಠಲ ||೩||

--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಜನಾ ಸುಕುಮಾರನೆ

ಅಂಜನಾ ಸುಕುಮಾರನೆ ಭವ- ||ಪ||
ದಂಜಿಕೆ ಬಿಡಿಸು ಬೇಗ ಸಂಜೀವರಾಯನೆ ||ಅ.ಪ||

ವಾಯುಪುತ್ರಾ ವಜ್ರಗಾತುರ
ನೋಯುವೆ ನಾ ಸಂಸಾರದೊಳ್
ಕೈಯ ಪಿಡಿದೆತ್ತುವರಾರೈ ||೧||

ಗುರುವರೇಣ್ಯ ತವ ಪಾದಪಂ
ಕರುಹಯುಗವಾಶ್ರಯಿಪರ
ನೆರಲಿನೊಳಗಿಟ್ಟುಯನ್ನನು ||೨||

ಕ್ಷೇಮದಾತನೇ ಶ್ರೀ ಗುರು
ರಾಮವಿಠಲ ಕಿಂಕರ
ಭೂಮಿಜಾಶೋಕನಾಶನ ||೩||


--------ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು


 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಕುಡೊಂಕಾದ ಮಂಚ ಅನಂತಕಾಲದ ಮಂಚ

ಅಂಕುಡೊಂಕಾದ ಮಂಚ ಅನಂತಕಾಲದ ಮಂಚ
ಶಂಕರನ ಕೊರಳಿಗೆ ಪದಕವಾಗಿಹ ಮಂಚ
ವೆಂಕಟ ಪುರಂದರವಿಠಲ ಮಲಗುವ ಮಂಚ
ಶೃಂಗಾರವಾಗಿದೆ ಶ್ರೀಹರಿ  ರಂಗನ ಮಂಚ
ಮಂಗಳಮೂರುತಿ ಪಾಂಡುರಂಗ ಮಲಗುವ ಮಂಚ





ದಾಸ ಸಾಹಿತ್ಯ ಪ್ರಕಾರ
ಬರೆದವರು

ಅರಿತವರನು ಕಾಣೆ ನಿನ್ನ ದೇವ

ಅರಿತವರನು ಕಾಣೆ ನಿನ್ನ ದೇವ
ಅರವಿದೂರನೆ ತವ ಮಹಿಮೆಯು ಘನ್ನ
ಭಂಡಿಕಾಲನು ಪಿಡಿದೆಯಂತೆ , ಹತ್ತು
ಭಂಡಿರಾಯನ ಸುತ ನೀನಾದೆಯಂತೆ
ಭಂಡಿಸುರನ ಕೊಂದೆಯಂತೆ , ಧುರದಿ
ಭಂಡಿನಡಿಸಿ ನರನ ಸಲಿಹಿದೆಯಂತೆ
ತಂದೆತಂದೆಗೆ ತಂದೆಯಂತೆ , ಜಗದ
ತಂದೆ ನಿನ್ನಗೆ ತಾಯಿತಂದೆಗಳಂತೆ
ತಂದೆ  ವಿಪ್ರಜರ ನೀನಂತೆ ಸ್ವಾಮಿ
ತಂದೆ ನೃಪಾಲನ ಸುತೆಗೀಶನಂತೆ
ಸಿಂಧೂರದ್ವಯವರದನಂತೆ , ಮಧ್ಯ
ಸಿಂದೂರವದನವು ನಿನಗಿಹುದಂತೆ
ಸಿಂಧುಮಂದಿರ ನೀನಂತೆ , ಶ್ಯಾಮ-
ಸುಂದರ ನಿನಗೆ ಭಕ್ತರ ಚಿಂತೆಯಂತೆ


---ಶ್ಯಾಮಸುಂದರದಾಸರು



 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಲ್ಲಿನೋಡಿ ಶ್ರೀನಿವಾಸನ

ಅಲ್ಲಿನೋಡಿ ಶ್ರೀನಿವಾಸನ ||ಪ||
ಪುಲ್ಲನಾಭನು ಸಿರಿನಲ್ಲೆಯಿಂದೊಪ್ಪಿರುವುದ ನೋಡಿ ||ಅ||

ಶೇಷನ ಫಣೆಯೊಳು ವಾಸವ ಮಾಡುತ  
ದಾಸಜನರ ಮನ ತೋಷಪಡಿಸುವುದ ನೋಡಿ||೧||

ಆದರದಿಂದಲಿ ಸಾಧನಪುರದೊಳು
ಸಾಧುಜನರ ಮನ ಮೋದಪಡಿಸುವುದ ನೋಡಿ||೨||


ಪ್ರಾಣನಾಥವಿಠಲನು ಸಾನುರಾಗದಲಿ ವೇಣು-
ಗಾನವ ಮಾಡುತ ಸಿರಿಮಾನಿನಿಯಿಂದೊಪ್ಪಿರುವುದ ನೋಡಿ ||೩||


-- ಬಾಗೇಪಲ್ಲಿ ಶೇಷದಾಸರು




 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರಿಗೇತರ ಮೊರೆಯನಿಡಲಿ

ಆರಿಗೇತರ ಮೊರೆಯನಿಡಲಿ
ಸಾರಿದವನ ಪೊರೆವ ಶ್ರೀ ರಮಣ ನೀನಿರಲು
ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ
ಅಳತೆಗೆ ಇನ್ನೊಬ್ಬನೇ ಹಾಗೆ
ಒಳಿತಿಗೊಬ್ಬರು ದೊರೆಗಳೇ ಮೇಲೆನ್ನ
ಪ್ರಳಯಕ್ಕೆ ಮತ್ತೊಬ್ಬನೇ ಪರಿಪರಿ
ಖಳರ ಮಾತುಗಳೇ ಸ್ವಾಮಿ
ಆ ಕಾಲದಲಿ ನೀನೆ ಈ ಕಾಲದಲಿ ನೀನೆ
ಸಾಕುವನು ಸ್ಥಿರವಾಗಿ ಇನ್ನೊಬ್ಬನೆ
ತಾಕು ತಗಲಿಲ್ಲದನೆ ಬೊಮ್ಮನೆ ಮೊದಲಾದ
ಲೋಕಪತಿಗಳ ಒಡೆಯನೆ ಈ ವೇಳೆ
ಲೋಕರನು ಕಾಯಬೇಕೋ ಸ್ವಾಮಿ
ಕಾಸು ಒಬ್ಬರಿಗಿಲ್ಲ ಲೇಸು ತೋರದಲೇ
ದೇಶಕೊಬ್ಬರು ಪೋದರೋ ಪೊಟ್ಟಿಗೆ
ಕೂಸುಗಳ ಮಾರುತ್ತ ಲುಂಡರೋ ಆ ಜನರ
ಕ್ಲೇಶಪಡೆಸದಲೆ  ಪೊರೆಯೊ ಕರುಣದಲಿ
ವಾಸುದೇವ ವಿಠಲ ಸ್ವಾಮಿ

 

ದಾಸ ಸಾಹಿತ್ಯ ಪ್ರಕಾರ
ಬರೆದವರು