ಪುಣ್ಯದ ಫಲ

ಪುಣ್ಯದ ಫಲ

ಪುರಂದರದಾಸರು "ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ, ಇನ್ನಾದರೂ ಎನ್ನ ಸಲಹೋ" ಎಂದು ಒಂದು ದೇವರನಾಮದಲ್ಲಿ ಹಾಡಿದ್ದಾರೆ. ಹಿಂದಿನ ದುಷ್ಕರ್ಮದಿಂದ ಬಳಲುತ್ತೇವೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ತೊಂದರೆಗೊಳಗಾಗಿದ್ದಾಗ,ಎಲ್ಲಿಂದಲೋ ಬಂದ ನೆರವಿನಿಂದ ಆ ತೊಂದರೆಯಿಂದ ಪಾರಾಗುವ ಘಟನೆಗಳ ಅನುಭವ ಎಲ್ಲರಿಗೂ ಆಗಿರುವುದೇ! ಇದನ್ನೇ ಪುಣ್ಯದ ಫಲ ಎನ್ನುವುದೇ?

ಇದರ ಬಗ್ಗೆ ಒಂದು ಸಂಸ್ಕೃತ ಸುಭಾಷಿತ ಏನು ಹೇಳುತ್ತೆ ನೋಡಿ - ಅನುವಾದ ನನ್ನದು:

ಕಾಡಿನಲಿ ಕಾಳಗದಿ ವೈರಿಗಳ ನಡುವಲ್ಲಿ
ನೀರಿನಲಿ ಕಿಚ್ಚಿನಲಿ ಬೆಟ್ಟದಾ ನೆತ್ತಿಯಲಿ
ಕಡಲಿನಲಿ ನಿದ್ದೆಯಲಿ ಮತ್ತಿನಲಿ ಮತ್ತಾಯ-
ತಪ್ಪಿದಲಿ ಕಾಯ್ವವು ಪುಣ್ಯಗಳು ಮುನ್ನಮಾಡಿದವು!

ಮೂಲ:

ವನೇ ರಣೇ ಶತ್ರು ಜಲಾಗ್ನಿಮಧ್ಯೇ
ಮಹಾರ್ಣವೇ ಪರ್ವತಮಸ್ತಕೇ ವಾ |
ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ
ರಕ್ಷಂತಿ ಪುಣ್ಯಾನಿ ಪುರಾ ಕೃತಾನಿ ||

-ಹಂಸಾನಂದಿ