ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ

ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ

(ಭೈರವಿ ರಾಗ ತೀನ್ ತಾಳ) ಯಾಕೆ ಬಾರಯ್ಯ ನೀ ಏಕೋ ದೇವನೆ ಎನ್ನ ಏಕಾಕಾರದಲೆನ್ನ ಹೊರಿಯಲಾರೇನಯ್ಯ ||ಪ|| ನೀರ ತೆರೆಯ ಕಡಿದು ಹೃದಯಕ ಸ್ವರಣದಿ ಭರದಿ ಮುಣುಗಿ ನೀರ ನಡಿಗಿ ದಣಿದೇನಯ್ಯ ||೧|| ವಾರಿಧಿ ಮಥನದಿ ಮೇರುಪರ್ವತವನ್ನು ಭಾರ ಬೆನ್ನಿಲಿ ಪೊತ್ತು ಬೆವರಿ ದಣಿದೇನಯ್ಯ ||೨|| ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ ಭರದಿಂದ ಹೊಯಿದಾಡಿ ಹೋರಿ ದಣಿದೇನಯ್ಯ ||೩|| ತರಳಗೊಲಿದು ಪ್ರಕಟಿಸಿ ದೈತ್ಯನ ಸೀಳಿ ಕರುಳ್ವನಮಾಲೆಯ ಧರಿಸಿ ದಣಿದೇನಯ್ಯ ||೪|| ಧರಿಯ ಮೂರಡಿ ಮಾಡಿ ಎರೆದು ದಾನವ ಬೇಡಿ ನರನ ಪಾತಾಳಕೊತ್ತಿ ಬೆಳೆದು ದಣಿದೇನಯ್ಯ ||೫|| ಹಿರಿಯಳ ಶಿರವನು ಹರಿದು ಕತ್ತರಿಸಿತ್ತು ಕರದಲ್ಲಿ ಪರಶುವ ಪಿಡಿದು ದಣಿದೇನಯ್ಯ ||೬|| ಶಿರಗಳ ಚೆಂಡಾಡಿ ರಾವಣೇಂದ್ರಜಿತನೆ ಶರದಿ ಕುಂಭಕರ್ಣನ ಎಚ್ಚು (?) ದಣಿದೇನಯ್ಯ ||೭|| ತುರುಗಳ ಕಾಯಿದು ಉರುಗನ ತುಳಿದಿತ್ತು ಗಿರಿಯ ಬೆರಳೆತ್ತಿ ತೋರಿ ದಣಿದೇನಯ್ಯ ||೮|| ಬರಿಯ ಬತ್ತಲೆ ಆಗಿ ಅರಿಯದೆ ತ್ರಿಪುರವ ಸೇರಿ ನಾರೇರ ವ್ರತವಳಿದು ದಣಿದೇನಯ್ಯ ||೯|| ಏರಿ ಕುದುರೆಯ ತಿರುಹುರಾಹುತನಾಗು ಪರಿಪರಿ ರೂಪವ ತಾಳಿ ದಣಿದೇನಯ್ಯ ||೧೦|| ಸರ್ವಾಪರಾಧವು ಕ್ಷಮೆಯಿಂದ ಮಹಿಪತಿಯ ಮನದೊಳು ಬಂದು ನಿಂದು ಹೊರೆದು ರಕ್ಷಿಸಯ್ಯ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು