ಯಾಕೆ ಕಡೆಗಣ್ಣಿಂದ ನೋಡುವೆ

ಯಾಕೆ ಕಡೆಗಣ್ಣಿಂದ ನೋಡುವೆ

( ರಾಗ ರೇಗುಪ್ತಿ ಅಟತಾಳ) ಯಾಕೆ ಕಡೆಗಣ್ಣಿಂದ ನೋಡುವೆ, ಕೃಷ್ಣ ನೀ ಕರುಣಾಕರನಲ್ಲವೆ ||ಪ|| ಭಕ್ತವತ್ಸಲ ನೀನಲ್ಲವೆ, ಕೃಷ್ಣ ಚಿತ್ಸುಖದಾತ ನೀನಲ್ಲವೆ ಅತ್ಯಂತ ಅಪರಾಧಿ ನಾನಾದಡೇನಯ್ಯ ಇತ್ತಿತ್ತ ಬಾರೆನ್ನಬಾರದೆ ರಂಗ || ಇಂದಿರೆಯರಸ ನೀನಲ್ಲವೆ, ಬಹು ಸೌಂದರ್ಯ ನಿಧಿ ನೀನಲ್ಲವೆ ಮಂದಮತಿ ನಾನಾದರೇನು ಕೃಪಾ- ಸಿಂಧು ನೀ ರಕ್ಷಿಸಬಾರದೆ ರಂಗ || ದೋಷಿಯು ನಾನಾದಡೇನಯ್ಯ, ಸರ್ವ- ದೋಷರಹಿತ ನೀನಲ್ಲವೆ ಘಾಸಿ ಯಾತಕೆ ನಿನ್ನ ನಂಬಿದೆ ಸಲಹಯ್ಯ ಶೇಷಶಾಯಿ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು