ಮಧ್ವಾಂತರ್ಗತ ವೇದವ್ಯಾಸಾ

ಮಧ್ವಾಂತರ್ಗತ ವೇದವ್ಯಾಸಾ

----ರಾಗ-ಮಧ್ಯಮಾವತಿ (ದರ್ಬಾರಿ ಕಾನಡಾ) ಆದಿತಾಳ ಮಧ್ವಾಂತರ್ಗತ ವೇದವ್ಯಾಸಾ , ಮಮ ಹೃದ್ವನರುಹ ಸನ್ನಿವಾಸ ||ಪ|| ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತತ್ಪಾದದ್ವಯಾಬ್ಜವ ತೋರೋ ||ಅ.ಪ|| ಹರಿತೋಪಲಾಭ ಶರೀರ ಮುನಿಪರಾಶರವರ ಸುಕುಮಾರ ಪರಮಪುರುಷ ಕರ್ತ ಸ್ವರ್ಣಗರ್ಭ ಪ್ರಮುಖ ನಿರ್ಜರ ಮುನಿಗಣನುತ ಪದಪಂಕಜ ಕುಲಕುಲದಿ ಧೃತರಾಷ್ಟ್ರ ಪಾಂಡುವಿದುರರ ಪಡೆದೈವರಿಗೊಲಿದು ಸಂ- ಹರಿಸಿ ದುರ್ಯೋಧನನ ಭಾರತ ವಿರಚಿಸಿದ ಸುಧೀಂದ್ರ ಕವೀಂದ್ರ ||೧|| ಬಾದರಾಯಣ ಬಹುರೂಪ ಸನಕಾದಿ ಸನ್ನುತ ಧರ್ಮಯೂಪಾ ವೇದೋದ್ಧಾರನಾದ ಅನಾದಿಕರ್ತ ಪೂರ್ಣಬೋಧ ಸದ್ಗುರುವರಾರಾಧಿಪದಯುಗ ಮೇದಿನಿಯೊಳಗೋರ್ವ ಪರಮಾಧಮ ಕೈಪಿಡಿಯೇ ಕರುಣ ಮಹೋ- ದಧಿಯೆ ಕಮನೀಯ ಕಪಿಲಪ್ರಬೋಧ ಮುದ್ರಾ-ಭಯಂಕರಾಂಬುಜ ||೨|| ಜಾತರೂಪ ಜಟಾಜೂಟ ಶ್ರೀನಿಕೇತನ ತಿಲಕ ಲಲಾಟ ಪೀತ ಕೃಷ್ಣಾಜಿನ ಶ್ವೇತ ಶ್ರೀ ಯಜ್ಞೋಪವೀತ ಮೇಖಲದಂಡಾನ್ವಿತ ಕಮಂಡಲ ಭೂತಿ ಕೃತ್ಸದ್ಭೂತಿದಾಯಕ ಶ್ರೀಪತಿ ಜಗನ್ನಾಥವಿಠಲನೆ ತುತಿಸಬಲ್ಲೆನೆ ಪಾತಕನು ಅಲ್ಪಾತ್ಮಕನು ನಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು