ಬಂದದ್ದೆಲ್ಲಾ ಬರಲಿ

ಬಂದದ್ದೆಲ್ಲಾ ಬರಲಿ

ಬಂದದ್ದೆಲ್ಲಾ ಬರಲಿ ಗೋ- ವಿಂದನ ದಯ ನಮಗಿರಲಿ (ಪಲ್ಲವಿ) ಮಂದರಧರ ಗೋವಿಂದ ಮುಕುಂದನ ಸಂದರ್ಶನ ಒಂದಿದ್ದರೆ ಸಾಲದೇ || (ಬಂದದ್ದೆಲ್ಲಾ ಬರಲಿ) ಆರು ಅರಿಯದಿರೆಲ್ಲನ ಮುರಾರಿಯು ಎನಗೆ ಪ್ರಸನ್ನ ಘೋರ ದುರಿತದ ಬನ್ನ* ಭಯ ಹಾರಿ| ಗುಣಾಂಬುಧಿ ಘನ್ನ ಶ್ರೀ ರಮಣನ ಸಿರಿ ಚರಣ ಸೇವಕರಿಗೆ ಕ್ರೂರ ಯಮನು ಶರಣಾಗತನಲ್ಲವೆ || (ಬಂದದ್ದೆಲ್ಲಾ ಬರಲಿ) ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು ದುರುಳ ಕೌರವ ಕಪಟದಿಂದ | ಇರಲು ಆ ಕ್ಷಣದಿಂದ ಹರಿ ಕೃಪೆಯವರಲ್ಲಿದ್ದ ಕಾರಣ ಬಂದ ದುರಿತ ಭಯವು ಬಯಲಾಯಿತಲ್ಲವೆ || (ಬಂದದ್ದೆಲ್ಲಾ ಬರಲಿ) ಸಿಂಗನ ಪೆಗಲೇರಿ ಸಾಗೆ ಕರಿಭಂಗವೇಕೆ ಮತ್ತವಗೆ ರಂಗನ ದಯವುಳ್ಳವಗೆ ಭವ ಭಂಗದ ಬಯಕೆಯ ಹಂಗೇ | ಮಂಗಳ ಮಹಿಮ ಶ್ರೀ ಪುರಂದರ ವಿಟ್ಠಲನ ಹಿಂಗದ ದಯವೊಂದಿದ್ದರೇ ಸಾಲದೇ || (ಬಂದದ್ದೆಲ್ಲಾ ಬರಲಿ) *ಬನ್ನ = ಕಷ್ಟ
ದಾಸ ಸಾಹಿತ್ಯ ಪ್ರಕಾರ
ಬರೆದವರು