ಅನಾದ್ಯನಂತಕಾಲದಲಿ ನೀ ನಿರ್ದೋಷ

ಅನಾದ್ಯನಂತಕಾಲದಲಿ ನೀ ನಿರ್ದೋಷ

 

ಅನಾದ್ಯನಂತಕಾಲದಲಿ ನೀ ನಿರ್ದೋಷ
ಅನಾಥಬಂಧುವೆ ಆಪ್ತಕಾಮ
ಅನವರತ ನಿನ್ನಧೀನದವನಯ್ಯ
ಕಾಣೆ ನಿನ್ನಗಲಿಪ್ಪ ಕಾಲವನ್ನು
ಜ್ಞಾನೇಚ್ಛಾಪ್ರಯತ್ನ ಚೇತನನಿಷ್ಠವೋ
ತಾನಾದರಾಗಲಿ ತನ್ನಿಯಾಮಕ ನೀನು
ಈ ನೀತಿ ಸಿದ್ಧವಾಗಿರೆ ಹಾನಿವೃದ್ಧಿಗೆ
ನಾನೇ ಕಾರಣನಲ್ಲ   ಅನಂದಮೂರ್ತಿ
ಪ್ರಾಣಾನಂತರ್ಯಾಮಿ ಶ್ರೀ ವ್ಯಾಸವಿಠಲರೇಯ
ನೀನಿಟ್ಟಪರಿಯಲ್ಲಿ ನಿಜವಾಗಿರುತಲಿಪ್ಪೆ
 
-- ಕಲ್ಲೂರು ಸುಬ್ಬಣ್ಣಾಚಾರ್ಯರು
ದಾಸ ಸಾಹಿತ್ಯ ಪ್ರಕಾರ
ಬರೆದವರು