ಮರುತ ನಿನ್ನಯ ಮಹಿಮೆ

ಮರುತ ನಿನ್ನಯ ಮಹಿಮೆ

ಶ್ರೀರಾಘವೇಂದ್ರರಿಂದ ವಿರಚಿತವಾದ ವಾಯುದೇವರ ಅವತಾರತ್ರಯ ಸುಳಾದಿ ಧ್ರುವತಾಳ ಮರುತನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು | ಚರಿಸಿದ ಮನುಜನಿಗೆ ದುರಿತಬಾಧೆಗಳ್ಯಾಕೆ | ಸರಸಿಜಾಸನಸಮ ಶಿರಿದೇವಿ ಗುರುವೆಂದು | ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ | ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ | ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ| ಸರಿಬಂದ ವ್ಯಾಪಾರದಿ ಆಡಿಸುವೆ ಜಡಜೀವರನು | ಪುರಹರ ಮೊದಲಾಗಿ ತೃಣಜೀವಕಡೆಯಾಗಿ| ಅರಿಯರು ಒಂದು ಕಾರ್ಯ ಗುರುವೆ ನಿನ್ನಯ ಹೊರತು | ಹೊರಗೆ ಗೊಂಬೆಗಳತೋರಿ ಒಳಗೆ ಥರಥರದಿ ನೀನು| ಇರುವೆ ಸರ್ವರಿಗೆ ಆಧಾರರೂಪದಿ ಅತಿ | ಸ್ಥಿರ ಭಕುತಿಯಿಂದ ಹರಿಯಧೇನಿಸುತ | ಮಿರುಗುವ ಪ್ರಭೆನಿನ್ನದು | ಬರುವ ಹೋಗುವ ವ್ಯಾಪಾರ ನಿನ್ನದು ದೇವ | ಭರದಿ ಶರಧಿಶಯನ ಶಿರಿವೇಣುಗೋಪಾಲರೇಯ | ಪರಮಹರುಷದಿ ಲೀಲಾತೋರುವ ನಿನ್ನೊಳಿದ್ದು ||೧|| ಮಟ್ಟತಾಳ ಅಖಿಲಾಗಮವೇದ್ಯ | ಅಖಿಲಾಗಮಸ್ತುತ್ಯ | ಅಖಿಲಾಗಮನಿಗಮ | ವ್ಯಾಪುತದೇವನೆ | ಅಖಿಲರೊಳಗೆ ನಿಂದೆ ಸಕಲ ಕಾರ್ಯಗಳೆಲ್ಲ | ಅಕುಟಿಲ ನಿನ್ನಾಗಿ | ಮಾಡಿಸಿ ಮೋದದಿಂದ | ಯುಕುತಿಯಿಂದ ಜಗವ ಅತಿಶಯವ ತಿಳಿದು | ಲಕುಮಿಯನು | ನೀನು ಕಾಣುವೆ ಸರ್ವದಾ | ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು | ಭಕುತಿಗಭಿಮಾನಿ ಭಾರತಿಗಳವಲ್ಲ | ಭೃಕುಟಿವಂದಿತ ನೀನು ವೇಣುಗೋಪಾಲನ | ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು ||೨|| ತ್ರಿಪುಟತಾಳ ಪೃಥ್ವಿಶಬ್ದದಿ ಭೂತಮಾತ್ರಾ ಪರಿಣಾಮಗಳಲ್ಲಿ | ಪ್ರತಿಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ | ಕೃತವಿಡಿದು ಸಕಲ ವ್ಯಾಪ್ತಿ ತಾತ್ವಿಕರಲ್ಲಿ ವ್ಯಾಪಾರ | ನಿನ್ನದಯ್ಯ ಲೋಕವಂದಿತ ದೇವ | ಶಾತಕುಂಭದಿಯಿಂದ ಬೊಮ್ಮಾಂಡವು ತಾಳ | ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ | ಕಾಂತನಾದ ಶಿರಿ ವೇಣುಗೋಪಾಲನ | ಪ್ರಿತಿಯಿಂದಲೆ ನಿನಗೆ ಒಲಿದೆ ಅಧಿಕನಾಗಿ ||೩|| ಅಟ್ಟತಾಳ ಇರುತಿ ಎಲ್ಲ ಜಗದಾಧಾರಕನಾಗಿ | ಇರಿತಿದ್ದ ಧಾರುಣಿಯೋಳಗೆ | ಮೂರು ಅವತಾರಗಳು ಧರಿಸಿ | ಕ್ರೂರರ ಸದೆದ್ದು ಮೀರಿದ ಕಾರ್ಯವೆ | ಮೇರುನುಂಗುವವನಿಗೆ ಒಂದುಚೂರು ನುಂಗಲು | ಶೂರತನವು ಏನು ಆರು ಬಣ್ಣುಪರೋ ವಿ| ಚಾರಿಸಿ ನಿನ್ನನು ನಾರಾಯಣಕೃಷ್ಣ ವೇಣುಗೋಪಾಲನಾ| ಧಾರ ದಿಂದಲಿ ಸೇವೆ ಬಾರಿಬಾರಿಗೆ ಮಾಳ್ಪೆ ||೪|| ಆದಿತಾಳ ಒಂದು ಅವತಾರದಲಿ ಕೊಂದೆ ರಕ್ಕಸರ ಮತ್ತೊಂದು ಅವತಾರದಿ ಅಸುರವೃಂದ ಘಾತಿಸಿದೆ | ನಂದ ತೀರಥರೂಪದಿಂದ ಸಕಲರಂದ ವಚನಗಳಕಡಿದು | ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳನು ನಿನ್ನಿಂದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತದ್ವೀಪ | ಸಿಂಧು ಸಪುತ ಏಕದಿಂದ ಹಾರುವನು | ಮುಂದಿದ್ದ ಕಾಲಿವೆಯನಿಂದ ನಿಂದು ತಾ ದಾಟಿದಂತೆ ಮಂದಮತಿಗಳು ಮನಕೆ ಏನೆಂದೆ ಎಲೋ ದೇವ | ಸುಂದರಾಂಗನೆ ಸುಖದಿಂದ ಪೂರಿತ ವಾಯುನಂದನ ಹನುಮ ರಾಮನಿಂದಾಲಿಂಗನ ಪಡೆದ | ಬಂದು ವಂದಿಸಿದ ಗೋಪಿಕಂದಗೆ ಭೀಮ | ನಂದಮೂರುತಿ ವ್ಯಾಸನಿಂದ ತತ್ತ್ವಗಳೆಲ್ಲ | ಅಂದದಿ ಓದುವ ಅಮರೇಂದ್ರ ವಂದಿತ ಮಧ್ವ | ತಂದೆ ಎನ್ನ ಬಿನ್ನಹ ಒಂದು ಲಾಲಿಸುವದು | ಪೊಂದಿಭೂಪತಿಯ ಮನದಿಚ್ಚೆ ಬೇಡಿದಂತೆ | ಇಂದು ಬೇಡುವೆ ಮನದಿಂದ ವಂದನೆ ಮಾಡುವೆ | ಕುಂದದೆ ಎನ್ನಳಿಪ್ಪ ಮಂದಮತಿ ಕಳೆವಾದೆಂದು | ಇಂದೀವರಾಕ್ಷ ಹೃದಯಮಂದರಿದೊಳು ನಿನ್ನ | ಅಂದವಾದ ರೂಪ ಇಂದು ತೋರುವದೆನೆಗೆ | ಸಿಂಧುಶಯನ ಶಿರಿವೇಣುಗೋಪಾಲನು | ನಿಂದ ನಿನೋಳು ಲೀಲಾ ಒಂದೊಂದು ಮಾಳ್ಪ ಚಿತ್ರ ||೫|| ಜತೆ - ಪವನನಿನ್ನಯ ಪಾದ ಪೊಂದಿದ ಮನುಜನು| ಜವನಪುರಕ್ಕೆ ಸಲ್ಲ ವೇಣುಗೋಪಾಲನು ಬಲ್ಲ ||೬|| ಕೃಪೆ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವೆಬ್ ಸೈಟ್
ದಾಸ ಸಾಹಿತ್ಯ ಪ್ರಕಾರ
ಬರೆದವರು