ಅಂಬೆಗಾಲಿಕ್ಕುತ ಬಂದ ಗೋವಿಂದ

ಅಂಬೆಗಾಲಿಕ್ಕುತ ಬಂದ ಗೋವಿಂದ ||ಪ|| ಅಂಬುಜನಾಭ ದಯದಿಂದ ಎನ್ನಮನೆಗೆ ||ಅ.ಪ|| ಜಲಚರ ಜಲವಾಸ ಧರಣೀಧರ ಮೃಗರೂಪ ನೆಲನಳೆದು ಮೂರಡಿ ಮಾಡಿ ಬಂದ ಕುಲನಾಶ ವನಮಾಸ ನವನೀತ ಚೋರನಿವ ಲಲನೆಯರ ವ್ರತಭಂಗ ವಾಹನತುರಂಗ ||೧|| ಕಣ್ಣ ಬಿಡುವನು ತನ್ನ ಬೆನ್ನು ತಗ್ಗಿಸುವನು ಮಣ್ಣು ಕೆದರಿ ಕೋರೆ ಬಾಯ ತೆರೆದು ಚಿಣ್ಣ ಭಾರ್ಗವ ಲಕ್ಷ್ಮಣಣ್ಣ ಬೆಣ್ಣೆಯ ಕಳ್ಳ ಮಾನವ ಬಿಟ್ಟು ಕುದುರೆಯನೇರಿದ ||೨|| ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳುಗೊಯಿಕ ಶರ ಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರವಿಠಲ ತಾ ಬಂದ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಡಿಗಳಿಗೊಂದಿಪೆ ಪುರಂದರಗುರುವೆ

ಅಡಿಗಳಿಗೊಂದಿಪೆ ಪುರಂದರಗುರುವೆ ||ಪ|| ಕಡುಜ್ಞಾನಭಕ್ತಿವೈರಾಗ್ಯದ ನಿಧಿಯೆ ||ಅ|| ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ಗುರು ವ್ಯಾಸರಾಯರಿಂದುಪದೇಶಗೊಂಡೆ ಎರಡೆರಡು ಲಕ್ಷದಿಪ್ಪತ್ತೈದು ಸಾವಿರ ವರನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ||೧|| ಗಂಗಾದಿ ಸಕಲ ತೀರ್ಥಂಗಳ ಚರಿಸಿದೆ ರಂಗವದನ ವೇದವ್ಯಾಸನ ಹಿಂಗದೆ ಮನದಲ್ಲಿ ನೆನೆದು ನೆನೆದು ಮೆರೆವ ಮಂಗಳಮಹಿಮೆಯ ನುತಿಸಿ ನುತಿಸಿ ನಾ ||೨|| ನಿನ್ನತಿಶಯಗುಣ ವರ್ಣಿಸಲಳವಲ್ಲ ನಿನ್ನ ಸೇವಕನ ಸೇವಕನೆಂತೆಂದು ಪನ್ನಗಶಯನ ಮುಕುಂದ ಕರುಣ ಪ್ರ- ಸನ್ನ ವಿಜಯವಿಠಲ ಸಂಪನ್ನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂತರಂಗದ ಕದವು ತೆರೆಯಿತಿಂದು

ಅಂತರಂಗದ ಕದವು ತೆರೆಯಿತಿಂದು ||ಪ|| ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ||ಅ|| ಏಸುದಿನವಾಯಿತೊ ಬೀಗಮುದ್ರೆಯ ಮಾಡಿ ವಾಸವಾಗಿದ್ದರೋ ದುರುಳರಿಲ್ಲಿ ಮೋಸವಾಯಿತು ಇಂದಿನ ತನಕ ತಮಸಿನ ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ||೧|| ಹರಿಕರುಣವೆಂಬ ಕೀಲಿಕೈ ದೊರಕಿತು ಗುರುಕರುಣವೆಂಬಂಥ ಶಕ್ತಿಯಿಂದ ಪರಮಭಾಗವತರ ಸಹವಾಸದಲಿ ಪೋಗಿ ಹರಿಸ್ಮರಣೆಯಿಂದಲ್ಲಿ ಬೀಗವ ತೆಗೆದೆ ||೨|| ಸುತ್ತಲಿದ್ದವರು ಪಲಾಯನವಾದರು ಭಕ್ತಿಕಕ್ಕಡವೆಂಬ ಜ್ಞಾನದೀಪ ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ ಎತ್ತನೋಡಿದರತ್ತ ಶೃಂಗಾರಸದನ ||೩|| ಹೊರಗೆ ದ್ವಾರವು ನಾಲ್ಕು , ಒಳಗೈದು ದ್ವಾರಗಳು ಪರ ದಾರಿಗೆ ಪ್ರಾಣ ಜಯವಿಜಯರು ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ ಸರಸಿಜನಾಭನ ಅರಮನೆಯ ಸೊಬಗು ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ

ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ ಅಡಿಗೆಯನು ಮಾಡಬೇಕಣ್ಣ ||ಪ|| ಅಡಿಗೆಯನು ಮಾಡಬೇಕಣ್ಣ , ಮದಿಸಬೇಕು ಮದಗಳನ್ನು ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ ||ಅ.ಪ|| ತನ್ನ ಗುರುವನು ನೆನೆಯಬೇಕಣ್ಣ , ತನುಭಾವವೆಂಬ ಭಿನ್ನ ಕಶ್ಮಲವಳಿಯಬೇಕಣ್ಣ ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಆದ ಕೆಚ್ಚ - ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||೧|| ತತ್ವಭಾಂಡವ ತೊಳೆಯಬೇಕಣ್ಣ , ಸತ್ಯಾತ್ಮನಾಗಿ ಅರ್ತಿ ಅಕ್ಕಿಯ ಮಥಿಸಬೇಕಣ್ಣ ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು ಹೊತ್ತಿಕೊಂಡಿಹ ಮಮತೆಯನ್ನು ಎತ್ತಿ ಹೆಸರ ಹಿಂಗಿಸುತಲಿ ||೨|| ಜನನ ಸೊಂಡಿಗೆ ಹುರಿಯಬೇಕಣ್ಣ , ನಿಜವಾಗಿ ನಿಂತು ತನುವ ತುಪ್ಪವ ಕಾಸಬೇಕಣ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅವರೇ ಕಾಯ್ ಬೇಕು ಕಾಲದಿ

ಅವರೇ ಕಾಯ್ ಬೇಕು ಕಾಲದಿ ಅವರೇ ಕಾಯ್ ಬೇಕು ||ಪ|| ಅವರೆ ಬಹುರುಚಿಯವರೆ ಸಂಪದ ಅವರಿಂದಲಿ ಮೋಕ್ಷಾದಿ ಸಾಧನವು ||ಅ|| ಯುಕ್ತರಾಗಿ ಇರುವ ಜನರಿಗೆ ಭುಕ್ತಿಯನು ಕೊಡುವ ಭಕ್ತರಿಗೆಲ್ಲಾ ಬಾಯ್ಸವಿಯಾದ ಸಕ್ತಿಪುಟ್ಟಿಸುವ ಸರ್ವೋತ್ತಮವಾದ ||೧|| ಇವರೆಲ್ಲ ಅಳೆದು ಬಿತ್ತಿ ವಿವರವಾಗಿ ಅಳೆದು ತವಕದಿ ಮೂಟೆಯ ಕಟ್ಟಿಟ್ಟಿದ್ದರೆ ಜವನವರೆಳೆಯುವ ಕಾಲಕ್ಕೊದಗುತ ||೨|| ಹಿತರಾಗಿ ಅವರೆ ಮಾತಾ- ಪಿತರಾಗೀ ಅವರೆ ಗತಿದಾಯಕರಾಗಿ ಅವರೆ ಭೂ- ಸುತೆ ಗುರುರಾಮವಿಠಲರೀರ್ವರು ||೩|| --- ರಚನೆ:-ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು