ಜಗನ್ನಾಥದಾಸ

ಅಪಮೃತ್ಯು ಪರಿಹರಿಸೊ ಅನಿಲ ದೇವ

( ರಾಗ ಕಾಂಬೋಧಿ(ಭೂಪ) ಝಂಪೆತಾಳ) ಅಪಮೃತ್ಯು ಪರಿಹರಿಸೊ ಅನಿಲದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ ಅನುದಿನವು ಎಮ್ಮನುದಾಸೀನ(/ಎಮ್ಮನೀನುದಾಸೀನ) ಮಾಡುವುದು ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ ದೊರೆ ನಿನ್ನೊಳಗಿಪ್ಪ ಪರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರನೆ ನೀ ದಯಾಕರನೆಂದು ಬಿನ್ನೈಪೆ ||೨| ಭವರೋಗಮೋಚಕನೆ ಪವಮಾನರಾಯ ನಿ- ನ್ನವರವನು ನಾನು ಮಾಧವಪ್ರಿಯನೆ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದೊಳು ಪ್ರವರ ನೀನಹುದೋ ||೩|| ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ- ಚಾನನಾದ್ಯಮರರಿಗೆ ಪ್ರಾಣದೇವ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿಲ್ಲುಬಾರೊ ದಯಾನಿಧೆ

( ರಾಗ-ಆನಂದಭೈರವಿ(ಕಿರ್ವಾಣಿ) ಅಟತಾಳ(ದೀಪಚಂದಿ) ) ನಿಲ್ಲುಬಾರೊ ದಯಾನಿಧೆ ||ಪ|| ನಿಲ್ಲುಬಾರೊ ಸರಿಯಿಲ್ಲ ನಿನಗೆ ಲಕ್ಷ್ಮೀ- ವಲ್ಲಭ ಮನ್ಮನದಲ್ಲಿ ಬಿಡದೆ ಬಂದು ||೧|| ಅತಿಮೃದುವಾದ ಹೃತ್ಶತಪತ್ರ ಸದನದಿ ಶಾಶ್ವತ ಭವ್ಯ ಮೂರುತಿ ಭಕ್ತವತ್ಸಲ ||೨|| ನಾನಾ ವ್ರತಂಗಳ ನಾನನುಕರಿಸಿದೆ ಶ್ರೀನಿಧಿ ನಿನ್ನಂಘ್ರಿ ಕಾಣಬೇಕೆನುತಲಿ ||೩|| ತನು ಮನ ಧನ ಚಿಂತೆಯ ಬಿಟ್ಟು ತ್ವತ್ಪದ ವನರುಹ ಧೇನಿಪೆ ಮನುಮಥನಯ್ಯ ||೪|| ಯಾತರ್ಯೋಚನೆ ಮನಸೋತ ಬಳಿಕ ಪುರು- ಹೂತವಂದಿತ ಜಗನ್ನಾಥವಿಠ್ಠ್ಲರೇಯ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸೋಹಂ ತವ ದಾಸೋಹಂ

( ರಾಗ- ಪೀಲೂ (ಭೈರವ) ಆದಿತಾಳ) ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪ|| ವಾಸುದೇವ ವಿಗತಾಘಸಂಘ ತವ ||ಅ. ಪ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ ಕರ್ಮಕೃತಾಗಮ ಕರ್ಮ ಫಲಪ್ರದ ಕರ್ಮಜಿತ ಕರ್ಮಬಂಧ ಮಹ ಕರ್ಮವಿಮೋಚಕ ಕರ್ಮನಿಗ್ರಹ ಕರ್ಮಸಾಕ್ಷಿ ತವ ||೩|| ಧರ್ಮಯೂಪ ಮಹ ಧರ್ಮವಿವರ್ಧನ ಧರ್ಮವಿದೊತ್ತಮ ಧರ್ಮನಿಧೇ ಧರ್ಮಸೂಕ್ಷ್ಮ ಮಹ ಧರ್ಮಸಂರಕ್ಷಕ ಧರ್ಮಸಾಕ್ಷಿ ಯಮಧರ್ಮಪುತ್ರ ತವ || ೪|| ಮಂತ್ರಯಂತ್ರ ಮಹ ಮಂತ್ರ ಬೀಜ ಮಹ ಮಂತ್ರ ರಾಜಗುರು ಮಂತ್ರಧೃತ ಮಂತ್ರಮೇಯ ಮಹ ಮಂತ್ರನಿಯಾಮಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಾರಕವಿದು ಹರಿಕಥಾಮೃತ

( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) ) ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ|| ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು ನೊಂದು ವೈನತೇಯವಾಹನ ಸನ್ನಿಧಾನ ಬೇಕು ಎಂಬವಗೆ ||೧|| ಪ್ರಿಯವಸ್ತುಗಳೊಳು ಪಾಂಡವರ ಸಖನೆ ಎಮಗೆ ಬ್ರಹ್ಮ ವಾಯು ಉಚ್ಚಸುರರು ತಂದೆತಾಯಿ ಎಂದರಿತವರಿಗೆ ||೨|| ಶ್ರೀ ಮುಕುಂದ ಸರ್ವ ಮಮ ಸ್ವಾಮಿ ಅಂತ- ರಾತ್ಮ ಪರಂಧಾಮ ದೀನಬಂಧು ಪುಣ್ಯನಾಮವೆಂದರಿತವರಿಗೆ ||೩|| ಜ್ಞೇಯಜ್ಞಾನಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕಯ ಮನದಿ ಮಾಡ್ದ ಕರ್ಮ ಶ್ರೀಯರಸನಿಗೀವ ನರಗೆ ||೪|| ಭೂತ ಭವ್ಯ ಭವತ್ಪ್ರಭು ಅನಾಥಜನರ ಬಂಧು ಜಗ- ನ್ನಾಥವಿಠಲ ಪಾಹಿಯೆಂದು ಮಾತು ಮಾತಿಗೆಂಬುವರಿಗೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತಟಿತ್ಕೋಟಿ ನಿಭಕಾಯ

(ರಾಗ - ಪಂತುವರಾಳಿ(ಕಾಲಿಂಗಡ) ಆದಿತಾಳ(ಕಹರವಾ) ತಟಿತ್ಕೋಟಿ ನಿಭಕಾಯ ಜಗನ್ನಾಥ ವಿಠಲಯ್ಯಾ ವಿಠಲಯ್ಯಾ ||ಪ|| ಭಜಿಸುವೆ ನಿನ್ನನು ಅಜಭವಸುರನುತ ಭಜಕಾಮರತರು ಕುಜನಕುಠಾರಾ ||೧|| ನೀ ಕರುಣಿಸದೆ ನಿರಾಕರಿಸಲು ಎನ್ನ ಸಾಕುವರ್ಯಾರು ದಯಾಪರ ಮೂರುತಿ ||೨|| ಶರಣಾಗತರನು ಪೊರೆವೆನೆಂಬ ತವ ಬಿರುದು ಕಾಯೋ ಕರಿವರ ಜಗನ್ನಾಥ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ

( ರಾಗ: ಬಿಲಹರಿ( ಭೀಮ್ ಪಲಾಸ್ ) ಆಟತಾಳ(ದೀಪಚಂದಿ) ) ರತುನ ದೊರಕಿತಲ್ಲ ಎನಗೆ ದಿವ್ಯ- ರತುನ ದೊರಕಿತಲ್ಲ ||ಪ|| ರತುನ ದೊರಕಿತು ಎನ್ನ ಜನ್ಮ ಪ- ವಿತ್ರವಾಯಿತು ಈ ದಿನವು ನಾ ಯತುನಗೈವುತ ಬರುತಿರಲು ಪ್ರ- ಯತನವಿಲ್ಲದೆ ವಿಜಯರಾಯರೆಂಬ ||ಅ. ಪ|| ಪಥದಿ ನಾ ಬರುತಿರಲು ಥಳಥಳವೆಂದು ಅತಿಕಾಂತಿ ಝಳಪಿಸಲು ಬೆರಗಾಗುತ್ತ ಅತಿಚೋದ್ಯವ ಕಾಣಲು ಸೇವಿಸುತಿರೆ ಸತತ ಕರಪಿಡಿದಾದರಿಸಿ ಮನೋ ರಥವ ಪೂರೈಸುತಲಿ ದಿವ್ಯ ಸ- ನ್ಮತಿಯ ಪಾಲಿಸಿ ಮೋಕ್ಷ ಸುಪಥವ ಅತಿಶಯದಿ ತೋರುತಲಿ ಪೊರೆಯುವ ||೧|| ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ ನಾನಾ ವಿಧ್ಹ್ ವಳದಲಿ ಸೇರಿಸುತಿರೆ ಪ್ರಾಣಪದಕವೆಂಬ ಮಾಲಾನು- ಮಾನವಿಲ್ಲದೆ ಕೊರಳಿಗ್ಹಾಕುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಿನ್ನೈಪೆ ನಿನಗಾನು ಭೀಮಸೇನ

(ರಾಗ ಕಾಂಬೋಧಿ (ಭೂಪ್ ) ಝಂಪೆತಾಳ) ಬಿನ್ನೈಪೆ ನಿನಗಾನು ಭೀಮಸೇನ ||ಪ|| ಬನ್ನಬಡುತಿಹ ಜನರ ಭಯವ ಪರಿಹರಿಸೆಂದು ||ಅ.ಪ|| ನೀಚರಿಂದಲಿ ಬಂದ ಭಯಗಳಿಂದಲಿ ಜನರು ಯೋಚಿಸುವರೆಮಗಾರು ಗತಿಯೆನುತಲಿ ಕೀಚಕಾಂತಕ ನಿನ್ನ ಕೀರ್ತಿ ಬಹುವಿಧ ಕೇಳಿ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ||೧|| ರೋಚನೇಂದ್ರನೆ ಭವವಿಮೋಚಕನು ನೀನೆ ಸಚರಾಚರಕೆ ಸಂತತ ಪುರೋಚನಾರೆ ಪ್ರಾಚೀನ ಕರ್ಮಾಬ್ಧಿವೀಚಿಯೊಳು ಮುಳುಗಿಹರ ಖೇಚರೇಂದ್ರಾಹಿಪ ತ್ರಿಲೋಚನರ ಗುರುವೆಂದು ||೨|| ಖಚರೋತ್ತಮನೆ ನಿನ್ನ ಸುಚರಿತ್ರೆಗಳ ಕೇಳಿ ರಚನೆಗಯ್ಯಬಲ್ಲೆನೆ ಅಚಲಸತ್ವ ಪ್ರಚಲಿಸುತ್ತಿಹ ಮನೋವಚನಕಾಯವ ಘಟೋ- ತ್ಕಚಜನಕ ಸಜ್ಜನರ ಪ್ರಚಯ ಮಾಡುವುದೆಂದು ||೩|| ಈ ಚತುರ್ದಶ ಭುವನದಾಚಾರ್ಯ ದೇಶ ಕಾ- ಲೋಚಿತ ಸುಧರ್ಮಗಳ ಸೂಚಿಸೆಮಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಶ್ರೀನಿಕೇತನ ಪಾಲಯ ಮಾಂ

( ರಾಗ - ಅರಭಿ(ದೇವಗಾಂಧಾರ) ಆದಿತಾಳ (ತೀನ್ ತಾಲ್) ) ಶ್ರೀನಿಕೇತನ ಪಾಲಯ ಮಾಂ , ಶ್ರೀನಿಕೇತನ ||ಪ|| ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ- ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ|| ಜ್ಞಾನಮಾನದಾ ಶರಣರ ಸುರ- ಧೇನು ಸರ್ವದಾ ನೀನೆಂದರಿತು ಸದಾನುರಾಗದಲಿ ಧ್ಯಾನಿಪೆ ಮನದನುಮಾನವ ಕಳೆಯೋ ||೧|| ಶ್ರೀಕರಾರ್ಚಿತ ಪಾದಾಬ್ಜ ಪ- ರಾಕು ಅಚ್ಯುತ ಶೋಕನಾಶನ ವಿಶೋಕಜನಕ ಹೃ- ದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||೨|| ಪನ್ನಗಾಚಲನಿವಾಸ ಪ್ರ- ಪನ್ನ ವತ್ಸಲ ಬಿನ್ನಪ ಕೇಳೊ ಜಗನ್ನಾಥವಿಠ್ಠಲ ಧನ್ಯನ ಮಾಡೊ ಶರಣ್ಯ ಶರಣನಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಧನ್ಯ ನಾನಾದೆ ವಿಠಲನ ಕಂಡು

( ರಾಗ - ಧನ್ಯಾಸಿ(ಸೋಹನಿ) ಆದಿತಾಳ(ತೀನ್ ತಾಳ) ) ಧನ್ಯ ನಾನಾದೆ ವಿಠಲನ ಕಂಡು ಧನ್ಯ ನಾನಾದೆ ಧನ್ಯ ನಾನಾದೆ ಕಾಮನ ಪಿತ ಲಾವಣ್ಯಮೂರುತಿಯ ಕಣ್ಣಲಿ ನೋಡಿ ||ಪ|| ದೇವವರೇಣ್ಯ ಸದಾವಿನೋದಿ ವೃಂ- ದಾವನ ಸಂಚಾರ ಗೋಪನ ಕಂಡು ||೧|| ಮಂಗಳಾಂಗ ಕಾಳಿಂಗಮರ್ದನ ಮಾ- ತಂಗ ವರವಶದ ರಂಗನ ಕಂಡು ||೨|| ಹಾಟಕಾಂಬರ ಕಿರೀಟ ಸಾರಥಿ ತಾಟಕಾರಿ ವೈರಾಟನ ಕಂಡು ||೩|| ಚಿಂತಿತ ಫಲದ ಕೃತಾಂತನಾತ್ಮಜಾ- ದ್ಯಂತರಹಿತ ನಿಶ್ಚಿಂತನ ಕಂಡು ||೪|| ಮಾತುಳಾಂತಕ ವಿಧಾತಪಿತ ಜಗ- ನ್ನಾಥವಿಠಲ ವಿಖ್ಯಾತನ ಕಂಡು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ

(ಪೀಲೂ ( ಜಂಜೂಟಿ) ರಾಗ , ಆದಿತಾಳ(ಕಹರವಾ) ) ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ ಸಂಗಸುಖವಿತ್ತು ಕಾಯೊ ಕರುಣಾಸಾಗರ ||ಪ|| ಅರಿಯರೊ ನೀನಲ್ಲದೆ ಮತ್ತನ್ಯ ದೈವರ ಮರೆಯರೊ ನೀ ಮಾಡಿದ ಅನಿಮಿತ್ತೋಪಕಾರ ತೊರೆಯರೊ ನಿನ್ನಂಘ್ರಿಸೇವೆ ಪ್ರತಿವಾಸರ ಅರಿಯರೊ ಪರತತ್ವವಲ್ಲದೆ ಇತರ ವಿಚಾರ ||೧|| ಮೂಕ ಬಧಿರರಂತಿಪ್ಪರೊ ನೋಳ್ಪ ಜನಕೆ ಕಾಕುಯುಕುತಿಗಳನವರು ತಾರರೊ ಮನಕೆ ಸ್ವೀಕರಿಸರನರ್ಪಿತವೊಂದು ಕಾಲಕೆ ಆ ಕೈವಲ್ಯ ಭೋಗ ಸುಖ ಅವರಿಗೆ ಬೇಕೆ ||೨|| ಜಯಾಜಯ ಲಾಭಾಲಾಭ ಮಾನಾಪಮಾನ ಭಯಾಭಯ ಸುಖ-ದುಃಖ ಲೋಷ್ಟಕಾಂಚನ ಪ್ರಿಯಾಪ್ರಿಯ ನಿಂದಾಸ್ತುತಿಗಳನುದಿನ ಶ್ರೀಯರಸ ಚಿಂತಿಸುವರೊ ನಿನ್ನ ಆಧೀನ ||೩|| ಈಶಿತವ್ಯರೆಂತಿಪ್ಪರೇಕಾಂತ ಭಕ್ತರು ದೇಶಕಾಲೋಚಿತ ಧರ್ಮಕರ್ಮಾಸಕ್ತರು ಆಶಾಕ್ರೋಧ ಲೋಭ ಮೋಹ ಪಾಶಮುಕ್ತರು
ದಾಸ ಸಾಹಿತ್ಯ ಪ್ರಕಾರ
ಬರೆದವರು