ಜಗನ್ನಾಥದಾಸ

ಹಿಂದಿಲ್ಲ ಇಂದು ಮುಂದಿಲ್ಲ

-- ರಾಗ ಪಂತುವರಾಳಿ (ಬಸಂತ) ಅಟತಾಳ (ಝಪ್) ಹಿಂದಿಲ್ಲ ಇಂದು ಮುಂದಿಲ್ಲ ಶ್ರೀ ಮು- ಕುಂದಗೆ ಸಮರೆನಿಸುವರು ಲೋಕದೊಳಗೆ ||ಪ|| ವನಧಿ(?) ಮಥನದಲ್ಲಿ ಅನಿಮಿಷರನ್ನ್ನು ಬಿಟ್ಟು ಜನನಿ ಲಕುಮಿ ನಾರಾಯಣನೊಲಿಸಿದಳಾಗಿ ||೧|| ಪ್ರಪಿತಾಮಹನು ಲೋಕಾಧಿಪ ಚತುರ್ಮುಖನಿಗೆ ತಪತಪವೆಂದ್ಹೇಳ್ದನುಪಮರೆನಿಸುವರು ||೨|| ಕಂಧರ ವರವೀಯೆ ಹಿಂದಟ್ಟಿದಸುರನ ಕೊಂದು ಶಿವನ ಕಾಯ್ದ ಇಂದಿರಾಪತಿಗೆಣೆ ||೩|| ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ ವೃಂದಾರಕರಿಗೆ ಆನಂದವಿತ್ತಗೆ ಸರಿ ||೪|| ಭೃಗುಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ ಜಗನ್ನಾಥವಿಠಲಗೆ ತ್ರಿಗುಣವರ್ಜಿತನೆಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಏತರವ ನಾನಯ್ಯ ಇಂದಿರೇಶ

--- ರಾಗ - ಮಲಹರಿ ತಾಳ-ಝಂಪೆ ಏತರವ ನಾನಯ್ಯ ಇಂದಿರೇಶ ಹೋತಾಹ್ವಯನೆ ನಿನ್ನಧೀನವೀ ಜಗವೆಲ್ಲ ||ಪ|| ಕಾಲಗುಣಕರ್ಮ ಸ್ವಭಾವಗಳ ಮನೆಮಾಡಿ ಶ್ರೀಲೋಲ ನೀ ಸರ್ವರೊಳಗೆ ಇದ್ದು ಲೀಲೆಗೈಯುತೆ ಲಿಪ್ತನಾಗದೆ ನಿರಂತರದಿ ಪಾಲಿಸುವೆ ಸಂಹರಿಪೆ ದಿವಿಜ ದಾನವರ ||೧|| ತಿಳಿಸಿಕೊಂಬುವ ನೀನೆ ಶ್ರುತಿತತಿಗಳೊಳಗಿದ್ದು ತಿಳಿಸುವವ ನೀನೆ ಉಪದೇಶಕರೊಳಿದ್ದು ತಿಳಿಯುವವವ ನೀನೆ ಬುದ್ಧ್ಯಾದಿಂದ್ರಿಯದಲಿದ್ದು ನೆಲೆಗೊಂಡು ನಿಖಿಳ ವ್ಯಾಪಾರ ಮಾಡುತಲಿಪ್ಪೆ ||೨|| ಅಗಣಿತ ಮಹಿಮ ಜಗಜ್ಜನ್ಮಾದಿಕಾರಣನೆ ತ್ರಿಗುಣವರ್ಜಿತ ತ್ರಿವಿಕ್ರಮನೇತ್ರಿಧಾಮ ಭೃಗುಮುನಿವಿನುತ ಜಗನ್ನಾಥವಿಠ್ಠಲ ನಿನ್ನ ಪೊಗಳಿ ಹಿಗ್ಗುವ ಭಾಗ್ಯ ಕೊಡು ಜನುಮ-ಜನುಮದಲಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ

---------ರಾಗ ಮುಖಾರಿ (ಭೀಮ್ ಪಲಾಸ್ ) ತಾಳ-ಝಂಪೆ ಕರುಣಿಸೆನಗಿನಿತು ಕರುಣಾರ್ಣವನೆ ನಿನ್ನ ಚರಣಾಬ್ಜದಲಿ ಭಕುತಿ, ವಿಷಯದಿ ವಿರಕುತಿ ||ಪ|| ಬಿಂಬನೇ, ಸರ್ವ ಪ್ರಯೋಜನವ ಮಾಡಿ ಪ್ರತಿ- ಬಿಂಬರಿಗೆ ಸತ್ಫಲಗಳೀವ ಕಾವ ಬಿಂಬನೇ ಸ್ವತಂತ್ರ ಪ್ರತಿಬಿಂಬಾ ಸ್ವತಂತ್ರತಮ- ನೆಂಬ ಸುಜ್ಞಾನಪೂರ್ವಕ ನಿನ್ನ ಭಜಿಪ ಸುಖ ||೧|| ಕಾರ್ಯ ಕಾರಣ ಅಂಶಿ ಅಂಶಾವತಾರ ಅಂ- ತರ್ಯಾಮಿ ವ್ಯಾಪ್ಯವ್ಯಾಪಕ ಪ್ರೇರಕ ಪ್ರೇರ್ಯ ಬಾಧಕ ಬಾಧ್ಯ ಪೋಷ್ಯ ಪೋಷಕ ರೂಪ ಆರ್ಯರಿಂದರಿತು ಅನುದಿನದಿ ಸುಖಿಸುವ ಭಾಗ್ಯ ||೨|| ತಾರತಮ್ಯದ ಜ್ಞಾನ , ದುರ್ವಿಷಯಗಳಲಿ ಸ- ದ್ವೈರಾಗ್ಯ , ಹರಿಪ್ರೇಮಿಗಳಲಿ ಪ್ರೇಮ ಸೂರಿಗಳ ಸಂಗ ಗುಣರೂಪ ಕ್ರಿಯೆಗಳನು ಸುವಿ- ಚಾರ ಗೈಯುತೆ ನಿತ್ಯದೊಳು ಮೋದಪಡುವಂತೆ ||೩|| ಮಿಂದೋದಕಗಳೆಲ್ಲ ಮಜ್ಜನವು, ದೇಹಾನು-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಯಾತರ ಭಯ ಶ್ರೀನಾಥನ ಪರಮ ಪ್ರೀತಿಯ ಪಡೆದವಗೆ

---ರಾಗ ಜಂಜೂಟಿ (ಭೈರವಿ) ಆದಿತಾಳ(ಕಹರವಾ) ಯಾತರ ಭಯ ಶ್ರೀನಾಥನ ಪರಮ- ಪ್ರೀತಿಯ ಪಡೆದವಗೆ ||ಪ|| ಕಾತರಗೊಳದಲೆ ಪಾತಕಹರವಿಧಿ- ತಾತನೆ ನಿಜಸುಖದಾತನೆಂದರಿತಗೆ|| ಅ.ಪ|| ದುಸುಮುಸುಗುಟ್ಟುವ ಶಶಿಮುಖಿಯಿಂದಲಿ ಹಸಗೆಟ್ಟಿದ್ದೇನೋ ಅಶನಾಚ್ಛಾದನ ತರಲಿಲ್ಲವೆನುತಲಿ ವ್ಯಸನ ಪಡುವುದೇನೋ ಕುಸುಮನಾಭ ಸುಮನಸ ವಂದಿತ ಪದ ವಸುದೇವನ ಸುತನೊಶದೊಳಗಿರುವಗೆ ||೧|| ಬಂಧುಜನರು ತನಗೊಂದಿಸಿದಾಕ್ಷಣ ಬಂದ ಭಾಗ್ಯವೇನೊ ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ ಮಂದರಧರ ಗೋವಿಂದನ ಮಾನಸ- ಮಂದಿರದೊಳು ತಂದಿಟ್ಟಿರುವವಗೆ ||೨|| ಕಾಶಿ ಕಂಚಿ ಕಾಳಹಸ್ತಿಯೆ ಮೊದಲಾದ ದೇಶ ತಿರುಗಲೇನೊ ಘಾಸಿಯಿಂದ ಆಯಾಸಪಡುತ ಆ- ವಾಸದೊಳಿರಲೇನೊ ಈಶಧೀಶ ಜಗನ್ನಾಥವಿಠ್ಠಲನ ದಾಸನೆನಿಸಿ ಸಂತೋಷದೊಳಿರುವವಗೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡಲೇತಕೆ ಪರರ ದೇಹಿಯೆಂದು

-- ರಾಗ - ಕಾಂಬೋಧಿ (ಭೂಪ್ ) ಝಂಪೆತಾಳ ಬೇಡಲೇತಕೆ ಪರರ ದೇಹಿಯೆಂದು ||ಪ|| ನೀಡುವ ದೊರೆ ನಮಗೆ ನೀನಿರಲು ಸರ್ವದಾ ||ಅ.ಪ|| ಗ್ರಾಸವನು ಬೇಡೆ ದೂರ್ವಾಸ ಮುನಿಗನ್ನನಾ- ಯಾಸದಿಂ ತತ್ಕಾಲದಲಿ ಕಲ್ಪಿಸಿ ಆ ಸಂಯಮಿಗೆ ಉಣಿಸಿ ದಣಿಸಿದ ಮಹಾದಾತ ದಾಶರಥೆ ನಿನ್ನ ಬಿಟ್ಟನ್ಯದೇವತೆಗಳನು ||೧|| ಖೂಳ ದುಶ್ಶಾಸನನು ದ್ರೌಪದಿಯ ಸಭೆಯೊಳು ದು- ಕೂಲವನು ಸೆಳೆಯೆ ದ್ವಾರಕಾಮಂದಿರ ಶ್ರೀಲೋಲ ಶ್ರೀಕೃಷ್ಣ ಕರುಣಿಸು ಕರುಣಿಸೆನೆ ಪಾಂಚಾಲಿ ಮೊರೆ ಕೇಳಿ ದಿವ್ಯಾಂಬರನಿಚಯವಿತ್ತೆ ||೨|| ಮಡದಿ ಕಳುಹಲು ಬಂದ ಬ್ರಾಹ್ಮಣನ ಪೀಡಿಸುವ ಬಡತನವ ಕಳೆದೆ ಒಪ್ಪಿಡಿ ಅವಲಿಗೆ ಪೊಡವಿಯನ್ನಾಳಿದೆ ಕ್ರಿಮಿಗೊಲಿದು , ಕರುಣದಲಿ ಜಡಜಸಂಭವ ಮೃಡಬಿಡೌಜರೀಪ್ಸಿತ ಕೊಡುತೆ ||೩|| ತಾಪಸೋತ್ತಮ ಮೃಕಂಡಾತ್ಮಜಗೆ ಕಲ್ಪಾಯು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕಾಯೊ ಕಾಯೊ ಕಮಲಾಯತಾಕ್ಷ

-- ರಾಗ ಬೇಹಾಗ್ (ಜೋಗಿಯಾ) ಆದಿತಾಳ(ದೀಪಚಂದಿ) ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ||ಪ|| ಕಾಯೊ ಕಾಯೊ ಕಾಯೊ ಕಮಲಾಯತಾಕ್ಷ ಭವ ತೋಯನಿಧಿಯೊಳು ಬಿದ್ದು ಬಾಯ ಬಿಡುವೆ ಬೇಗದಿ ಬಂದು ||ಅ,ಪ|| ಅದ್ವೈತತ್ರಯ ದಧ್ವಪ್ರವರ್ತಕ ಸದ್ವೈಷ್ಣವ ಪಾದದ್ವಯ ತೋರಿ ||೧|| ಸಂಜೆಯ ತೋರಿ ಧನಂಜಯನುಳುಹಿದೆ ಮಂಜುಳ ಚರಿತ ನಿರಂಜನ ಮೂರ್ತೇ ||೨|| ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂತೆ ಪ್ರತಿ ಪ್ರತಿ ಕ್ಷಣದಿ ||೩|| ಅಧಮನು ನಾನಹುದು ದಧಿಶಯನ ಸನ್- ಮುದಮುನಿ ಮತ ಪೊಂದಿದ ರಣುಗನ ನೀ ||೪|| ನೀ ದಯಮಾಡದಡೇ ದಿವಿಜರು ಒಲಿ- ದಾದರಿಸುವರೇ ವೃಕೋದರ ವಂದ್ಯ ||೫|| ಸತ್ಯಾತ್ಮಕ ಭವಭೃತ್ಯಗೆ ಬಂದಪ- ಮೃತ್ಯು ಕಳೆದು ಸಂಪತ್ತು ಪಾಲಿಸಿ ||೬|| ಎಲ್ಲರೊಳಿಹ ಕೈವಲ್ಯದರಸೆ ನೀ ಬಲ್ಲಿದನೆಂಬುದ ಬಲ್ಲೆ ಬಹುಬಗೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾಸರಿಗುಂಟೇ ಭಯ ಶೋಕ

------ರಾಗ- ನಾದನಾಮಕ್ರಿಯೆ (ಕಾಲಿಂಗಡಾ) ಅಟತಾಳ( ಕಹರವಾ) ದಾಸರಿಗುಂಟೇ ಭಯ ಶೋಕ , ಹರಿ- ||ಪ|| ದಾಸರಿಗುಂಟೇ ಭಯ ಶೋಕ ವಾಸುದೇವನ ಸದಾ ಸ್ಮರಿಸುವ ಹರಿ- ದಾಸರಿಗುಂಟೇ ಭಯ ಶೋಕ ||ಅ.ಪ|| ಕಾಮಧೇನು ವರ ಕಲ್ಪವೃಕ್ಷ ಚಿಂ- ತಾಮಣಿ ಕೈಸೇರಿದಕಿಂತ ನಾಮತ್ರಯದಿಂದಪ್ಪುದು ಸುಖವು ಸು- ಧಾಮನೆ ಸಾಕ್ಷಿದಕೆಂಬ ಹರಿ ||೧|| ರಾಮಚಂದ್ರ ಶಬರಿ ತಿಂದೆಂಜಲ- ಜಾಮಿಳ ಮಾಡ್ದ ಕುಕರ್ಮಗಳ ಧೂಮಕೇತು ತಾ ಭುಂಜಿಸುವಂದದಿ ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ ||೨|| ನೇಮ ಮಂತ್ರ ಜಪ ದೇವತಾರ್ಚನ ಸ- ಕಾಮುಕವಾಗಲು ತ್ಯಜಿಸುತಲಿ ಧೀಮಂತರಾಗತಿಪ್ರಿಯವಾಗಲು ಬಹು ತಾಮಸ ಕರ್ಮವ ಮಾಳ್ಪುದೆಂಬ ಹರಿ ||೩|| ಏನು ಮಾಡಿದಪರಾಧವ ಕ್ಷಮಿಸುವ ಏನು ಕೊಟ್ಟುದನು ಕೈಗೊಂಬ ಏನು ಬೇಡಿದಿಷ್ಟಾರ್ಥವ ಕೊಡುವ ದ- ಯಾನಿಧಿ ಅನುಪಮನೆಂಬ ಹರಿ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆ ವೆಂಕಟಗಿರಿನಿಲಯನಂಘ್ರಿ

--ರಾಗ ಶಂಕರಾಭರಣ (ಭೈರವಿ) ಆದಿತಾಳ(ಧುಮಾಳಿ) ಆ ವೆಂಕಟಗಿರಿನಿಲಯನಂಘ್ರಿ ರಾ- ಜೀವಯುಗ್ಮಗಳಿಗೆ ನಮಿಸುವೆನು ||ಪ|| ಸೇವಿಪ ಜನರಿಗಮರತರುವೆನಿಸಿ ಧ- ರಾವಲಯಾಖ್ಯ ದಿವಿಯೊಳೆಸೆವ ||ಅ.ಪ|| ಆವನಂಘ್ರಿಜಲ ಸಕಲ ಜಗತ್ತಿಗೆ ಪಾವನಕರವೆಂದೆನಿಸುವದು ಶ್ರೀವಿಧಿಭವ ಶಕ್ರಾದ್ಯರು ಅವನ ಸೇವಕಸೇವಕರೆನಿಸುವರು ||೧|| ದೇವೋತ್ತಮ ತಾನಾಗಿ ನಿಖಿಲ ಜಡ ಜೀವ ಭಿನ್ನ ಕರ್ಮವ ಮಾಳ್ಪ ಸ್ಥಾವರ ಜಂಗಮರೊಳಗೆ ನೆಲೆಸಿ ವೇ- ದಾವಳಿಯಿಂದ ಸ್ತುತಿಸಿಕೊಂಬ ||೨|| ಮಾತರಿಶ್ವನೊಡನಹಿಪನೊರೆದ ಸ- ತ್ವಾತಿಶಯವ ತೋರೆನುತಾಗ ಜಾತರೂಪ ಶೈಲಾತ್ಮಜನೊಪ್ಪಿರೆ ವೀತಿಹೋತ್ರ ಸಖ ಕಿತ್ತೊಗೆಯ ||೩|| ಪೀತಕರ್ಣನಳವಳಿದು ಸ್ತುತಿಸೆ ನಿ- ಕೇತನತ್ರಯವ ನಿಳಿದು ಬೇಗ ಧಾತ ಮಹಿಳೆ ತೀರ್ಥದಿ ಲಕುಮಿಸ- ಮೇತನಾಗಿ ಮೋದಿಸುತಿಪ್ಪ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸರ್ವಾಂತರ್ಯಾಮಿ ಸಲಹೊ

--ರಾಗ ಕಾಂಬೋಧಿ (ಭೂಪ) ತಾಳ-ಝಂಪೆ ಸರ್ವಾಂತರ್ಯಾಮಿ ಸಲಹೊ ಎನ್ನ ||ಪ|| ದುರ್ವಾರ್ತೆ ಕೇಳಿ ಮನ ಬಿಡದೆ ಚಿಂತಿಸುತಿದೆ||ಅ.ಪ|| ಜೀವರಿಗೆ ಗುಣಕಾಲಕರ್ಮಪ್ರಕೃತಿಗಳ ಸ್ವ- ಭಾವಗಳನನುಸರಿಸಿ ಸುಖ-ದುಃಖವ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ- ತ್ತಾವನೈ ಭಕ್ತರನು ಪಾಲಿಸುವ ದಾತ ||೧|| ಸತ್ಯಸಂಕಲ್ಪ ನೀನೆಂಬುದೆಂದಿಗು ಸತ್ಯ ಭೃತ್ಯವತ್ಸಲನೆಂಬೊ ಬಿರುದಿಲ್ಲವೆ ದತ್ತಾತ್ರೇಯ ನಿನ್ನ ಸ್ಮರಣೆ ಮಾತ್ರದಿ ಅಪ- ಮೃತ್ಯು ಪರಿಹರವಹುದು ಸಂದೇಹವಿಲ್ಲಿದಕೆ ||೨|| ಶ್ರೀಪತೇ ಎನ್ನ ವಿಜ್ಞಾಪನೆಯ ಕೈಕೊಂಡು ಪಾಪಿ ಜನರಿಂದ ಬಂದಾಪತ್ತನು ನೀ ಪರಿಹರಿಸಯ್ಯ ದ್ರೌಪದೀವರದ ಕರು- ಣಾಪಯೋನಿಧಿ ಜಗನ್ನಾಥವಿಠ್ಠಲಸ್ವಾಮಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಕ್ಷಿಸೊ ಶ್ರೀಶ ಶ್ರೀನಿವಾಸ

( ರಾಗ- ಮಧ್ಯಮಾವತಿ(ಸಾರಂಗ) ಅಟತಾಳ(ದೀಪಚಂದಿ) ) ರಕ್ಷಿಸೊ ಶ್ರೀಶ ಶ್ರೀನಿವಾಸ ||ಪ|| ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗಾ- ಧ್ಯಕ್ಷ ಖಳಜನಶಿಕ್ಷ ಪಾಂಡವ- ಪಕ್ಷ ಕರುಣಕಟಾಕ್ಷದಲಿ ನೀ- ನಿಕ್ಷಿಸುತ ಪೊರೆ ಪಕ್ಷಿವಾಹನ||ಅ.ಪ|| ಕೊಂಚ ಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರ ಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಪಂಚು ನೋಟದ ಮಿಂಚಿಗೆನ್ನ ಮನ ಚಂಚಲವು ಪುಟ್ಟಿ ವಂಚಿಸೇ ಯಮನಂಚಿಗೆ ತಲುಪಿದೆ ||೧|| ಕಿಟ್ಟಗಟ್ಟಿದ ಕಬ್ಬಿಣದಂತೆ ಕೆಟ್ಟ ಕಿಲ್ಬಿಷದ ಕೂಪದಿ ಬಿದ್ದು ಧಿಟ್ಟ ನಿನ್ನಯ ಗುಟ್ಟು ತಿಳಿಯದೆ ಹೊಟ್ಟೆಗೋಸುಗ ಕೆಟ್ಟೆ, ಕುಜನರ ಥಟ್ಟನೆ ಕಾಲಗಟ್ಟಿ ಬಹು ಶ್ರಮ- ಪಟ್ಟು ನಾ ಕಂಗೆಟ್ಟೆ ಪ್ರತಿದಿನ || ೨|| ಶ್ರೀ ಕಮಲೇಶ ಹೃತ್ಪದ್ಮದಿ- ನೇಶಪ್ರಕಾಶ ಬೇಗನೆ ಬಂದು
ದಾಸ ಸಾಹಿತ್ಯ ಪ್ರಕಾರ
ಬರೆದವರು