ಜಗನ್ನಾಥದಾಸ

ನೀಚನಲ್ಲವೆ ಇವನು

-------ರಾಗ- ಪಂತುವರಾಳಿ (ಮಾಲಕಂಸ್) ರೂಪಕತಾಳ (ಝಪ್ ತಾಲ್) ನೀಚನಲ್ಲವೆ ಇವನು ನೀಚನಲ್ಲವೆ ||ಪ|| ಕೀಚಕಾರಿಪ್ರಿಯನ ಗುಣವ ಯೋಚಿಸದಲಿಪ್ಪ ನರನು ||ಅ.ಪ|| ಜನನಿ ಜನಕರಂತೆ ಜನಾ- ರ್ದನನು ಸಲಹುತಿರಲು ಬಿಟ್ಟು ಧನಿಕರ ಮನೆ ಮನೆಗಳರಸಿ ಶುನಕನಂತೆ ತಿರುಗುತಿಹನು ||೧|| ಜೀವ ತಾನಕರ್ತೃವೆಂದು ದೇವನೊಬ್ಬ ಕರ್ತೃ ರಮಾ- ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು ||೨|| ಲೋಕವಾರ್ತೆಗಳಲಿ ಏಡ ಮೂಕನಂತೆ ವಿಷಯಗಳವ- ಲೋಕಿಸದಲೆ ಶ್ರೀಶಗಿವು ಪ್ರ- ತೀಕವೆಂದು ತಿಳಿಯದವನು ||೩|| ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು- ಗ್ರಹವ ಮಾಡುಯೆಂದು ಬರಿದೆ ಐಹಿಕಸುಖವ ಬಯಸುವವನು ||೪|| ಶ್ರೀಕಳತ್ರನಂಘ್ರಿ ಕಮಲ- ವೇಕಚಿತ್ತದಲ್ಲಿ ಮನೋ- ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸುವವನು ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಗತಿಯಾವುದೆನಗೆ ಶ್ರೀಪತಿಯೆ ಪೇಳೊ

----- ರಾಗ ಕಾಂಬೋಧಿ (ಬಾಗೇಶ್ರೀ) ಝಂಪೆತಾಳ ಗತಿಯಾವುದೆನಗೆ ಶ್ರೀಪತಿಯೆ ಪೇಳೊ ||ಪ|| ಮತಿಗೆಟ್ಟು ಪ್ರತಿದಿನದಿ ಸತಿಯ ಬಯಸುವೆನೊ ||ಅ.ಪ|| ಮರುಳುಬುದ್ಧಿಗಳಿಂದ ಕರಸೂಚನೆಯ ಮಾಡಿ ತರಳೆಯರ ತಕ್ಕೈಸಿ ಸರಸವಾಡಿ ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು ||೧|| ನಾಚಿಕೆಯ ತೊರೆದು ಬಲು ನೀಚರಲ್ಲಿಗೆ ಪೋಗಿ ಯಾಚಿಸುವೆ ಸುವಿಚಾರಹೀನನಾಗಿ ಆ ಚತುರ್ದಶ ವರುಷದಾರಭ್ಯ ಈ ವಿಧದಿ ಆಚರಿಪೆನೈ ಸವ್ಯಸಾಚಿಸಖ ಕೃಷ್ಣ ||೨|| ನಾನು ನನ್ನದು ಎಂಬ ಹೀನಬುದ್ಧಿಗಳಿಂದ ಜ್ಞಾನಶೂನ್ಯನು ಆದೆ ದೀನಬಂಧು ಸಾನುರಾಗದಿ ಒಲಿದು ನಾನಾಪ್ರಕಾರದಲಿ ನೀನು ಪಾಲಿಸು ಹರಿಯೆ ಜ್ಞಾನಗುಣಪರಿಪೂರ್ಣ ||೩|| ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ- ದಾಂಭುಜಕ್ಕೆರಗದಲೆ ಸಂಭ್ರಮದಲಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಿನ್ನ ಸಂಕಲ್ಪಾನುಸಾರ ಮಾಡೋ

--- ರಾಗ ಕಾಂಬೋಧಿ(ಭೂಪ್ ) ಝಂಪೆತಾಳ ನಿನ್ನ ಸಂಕಲ್ಪಾನುಸಾರ ಮಾಡೋ ಎನ್ನ ಸಾಕುವ ದೊರೆಯೆ ಮಾನ್ಯ ಮಾನದನೇ ||ಪ|| ಪಾತ್ರನೆಂದೆನಿಸೋ ಪಾಪಾತ್ಮನೆಂದೆನಿಸೋ , ಇವ ಶ್ರೋತ್ರಿಯನೆಂದೆನಿಸೋ ಬಲುಶುಂಠನೆಂದೆನಿಸೋ ಪುತ್ರ-ಮಿತ್ರಾದ್ಯರಿಂ ಬೈಸೋ , ಪೂಜೆಯ ಗೈಸೋ ಕರ್ತು ನೀ ಜಗಕೆ ಸರ್ವತ್ರವ್ಯಾಪಕ ದೇವ ||೧|| ಜನರೊಳಗೆ ನೀನಿದ್ದು ಜನ್ಮಜನ್ಮಗಳಲಿ ಗುಣಕಾಲ ಕರ್ಮ ಸ್ವಭಾವಂಗಳ ಅನುಸರಿಸಿ ಪುಣ್ಯ-ಪಾಪಂಗಳ ಮಾಡಿಸಿ ಫಲಗಳ ಉಣಿಸಿ ಮುಕ್ತರ ಮಾಡಿ ಪೊರೆವ ಕರುಣಾಳೋ ||೨|| ಯಾತಕೆಮ್ಮನು ಇನಿತು ದೂರಕನ ಮಾಡುವಿ ಧರಾತಳದೊಳನುದಿನದಿ ಮಾಯಾಪತೇ ಭೀತಿಗೊಂಬುವನಲ್ಲ ಭಯನಿವಾರಣ ಜಗ- ನ್ನಾಥವಿಠಲ ಜಯಪ್ರದನೇ ಜಗದೀಶಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪತಿತಪಾವನ ಪೂರ್ಣಕಾಮ ನೀನೇ

---- ರಾಗ -ಪಂತುವರಾಳಿ(ಯಮನ್) ಆದಿತಾಳ(ಝಪ್) ಪತಿತಪಾವನ ಪೂರ್ಣಕಾಮ ನೀನೇ ||ಪ|| ಗತಿ ಎನಗೆ ಸಂತತ ಪರಂಧಾಮ ||ಅ.ಪ|| ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸುಫಲದಾಯಿ ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ ಚಪಲರಾಗಿಹರೊ ಕಾಶ್ಯಪಿ ಸುರರನು ಕಾಯೊ ||೧|| ಮಾನ್ಯಮಾನದ ಬ್ರಹ್ಮಣ್ಯದೇವ ನೀನೆಂದು ಉನ್ನತ ಶ್ರುತಿಗಳು ಬಣ್ಣಿಸುತಿಹವು ಸನ್ನುತ ಮಹಿಮನೆ ನಿನ್ನ ಪೊಂದಿದವರ ಬನ್ನಬಡಿಪುದು ನಿನಗಿನ್ನು ಧರ್ಮವಲ್ಲ ||೨|| ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣಕುಲಕೆ ಮಂಗಳವೀಯೊ ಕಲುಷದೂರ ಸುಲಭದೇವೇಶ ನಿನ್ನುಳಿದು ಕಾಯ್ವರಕಾಣೆ ಬಲಿಯ ಬಾಗಿಲ ಕಾಯ್ದ ಜಗನ್ನಾಥವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮನವೆ ಮರೆವರೇನೊ ಹರಿಯ

---- ರಾಗ ಯರಕಲ ಕಾಂಬೋಧಿ (ಕಾಫಿ) ಅಟತಾಳ(ತೀನ್ ತಾಲ್) ಮನವೆ ಮರೆವರೇನೊ ಹರಿಯ ಬಹು ||ಪ|| ಜನುಮಗಳಲಿ ಪಟ್ಟ ಬವಣೆಗಳರಿಯ ||ಅ.ಪ|| ವಿಷಯ ಚಿಂತನೆ ಮಾಡೆ ಸಲ್ಲ ಮೇಷ ವೃಷಣನಾದನು ಪೌಲೋಮಿಯ ನಲ್ಲ ಝಷಕೇತುವಿನ ಮೇಳಹೊಲ್ಲ ನಿ- ರಶನನಾಗೊ ಯಮರಾಯ ಎಂದೆಂದು ಕೊಲ್ಲ ||೧|| ಧನವೆ ಜೀವನವೆಂಬೆ ನೀನು, ಸುಯೋ- ಧನನ ನೋಡು, ಧನದಿಂದ ಏನಾದ ಕೊನೆಗೆ ಅನಿರುದ್ಧದೇವನ ಮನೆಗೆ ಪೋಪ ಘನವಿಜ್ಞಾನ ಸಂಪಾದಿಸೊ ಕೊನೆಗೆ ||೨|| ಹರಿದಾಸನಾಗಿ ನೀ ಬಾಳೋ , ಗುರು- ಹಿರಿಯರ ಪಾದಕಮಲಕೆ ನೀ ಬೀಳೊ ನರರ ನಿಂದಾಸ್ತುತಿ ತಾಳೋ, ದೇಹ ಸ್ಥಿರವಲ್ಲ ಸಂಸಾರ ಬಲು ಹೇಯ ಕೇಳೊ ||೩|| ಜಿತನಾಗಿ ಪೇಳುವೆ ಸೊಲ್ಲ, ಹರಿ- ಕಥೆಯಲ್ಲಿ ನಿರತನಾಗಿರು, ಲೋಹಕಲ್ಲ ಪ್ರತಿಮೆ ಪೂಜಿಸಲಲ್ಲೇನಿಲ್ಲ , ಪರೀ- ಕ್ಷಿತನೆಂಬ ರಾಯ ಈ ಮಹಿಮೆಯ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು

---ರಾಗ ಮೋಹನ (ಭೂಪ್) ಝಂಪೆತಾಳ ಸಿರಿರಮಣ ತವ ಚರಣ ದೊರಕುವದು ಹ್ಯಾಗಿನ್ನು ಪರಮ ಪಾಪಿಷ್ಠ ನಾನು || ಪ|| ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ವ್ಯರ್ಥ ನರಕಕ್ಕೆ ಗುರಿಯಾದೆನೊ ಇನ್ನು ||ಅ.ಪ|| ಕೆರೆ ಭಾವಿ ದೇವಮಂದಿರಗಳನು ಕೆಡಿಸಿ , ದಿವ್ಯ ಹಿರಿದಾಗಿ ಮನೆ ಕಟ್ಟಿದೆ ನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯ ಮರ ಕಡಿಸಿ ಕೊರೆಸಿ ಬಾಗಿಲ ಮಾಡಿದೆ ಪವನ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸೌಖ್ಯ ಸುರಿದೆ ಮೆರೆದೆ ||೧|| ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ ಶಶಿಮುಖಿಯೆ ಬಾರೆಂದು ಅಸವಸದಿ ಬಣ್ಣಿಸುತ ಹಸನಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶಿ ದಿನದಲಿ ಅಶನವೆರಡ್ಹೊತ್ತುಣ್ಣುತ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಪಿಡಿಯೆನ್ನ ಕೈಯ್ಯ ರಂಗಯ್ಯ

----ರಾಗ ಮಧ್ಯಮಾವತಿ (ಭೂಪ) ಅಟತಾಳ(ದೀಪಚಂದಿ) ಪಿಡಿಯೆನ್ನ ಕೈಯ್ಯ ರಂಗಯ್ಯ ||ಪ|| ಪಿಡಿಯೆನ್ನ ಕೈಯ್ಯ ಪಾಲ್ಗಡಲೊಡೆಯನೆ ಮೋಹ- ಮಡುವಿನೊಳ್ಬಿದ್ದು ಬಾಯ್ಬಿಡುವೆ, ಬೇಗನೆ ಬಂದು ||ಅ.ಪ|| ನೀರಜನಾಭ ನಂಬಿದೆ ನಿನ್ನ ನೀರಪ್ರದಾಭಾ ಕಾರುಣ್ಯನಿಧಿ ಲಕ್ಷ್ಮೀನಾರಸಿಂಹನೆ ಪರಿ- ವಾರ ಸಹಿತ ಈ ಶರೀರದೊಳಡಗಿದ್ದು ಘೋರತರ ಸಂಸಾರ ಪಂಕದಿ ಚಾರಿವರಿದೆನೊ ದೂರನೋಳ್ಪರೆ ಹೇ ರಮಾಪತೆ ಗಾರುಮಾಡದೆ ಚಾರುವಿಮಲ ಕರಾರವಿಂದದಿ ||೧|| ಅನಿಮಿತ್ತ ಬಂಧು ನೀನೇ ಗತಿ ಗುಣಗಣಸಿಂಧು ಅನಘನೆ ಸೇವಿಸುವೆನೊ ವಿಧಿಭವಸಕ್ರಂ- ದನ ಮುಖ್ಯದೇವ ಸನ್ಮುನಿಗಣಾರ್ಚಿತ ಪಾದ ಅನುಜ ತನುಜಾಗ್ರಜ ಸದಾಣುಗ ಜನನಿ ಜನಕ ಪಶು ಕೃಷೀ ಧನ ಘನಸದನ ಸಂಹನನ ಮೊದಲಾ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಇದು ನಿನಗೆ ಧರ್ಮವೆ ಇಂದಿರೇಶ

----ರಾಗ ಕಾಂಬೋಧಿ (ಸಾರಂಗ) ಝಂಪೆತಾಳ ಇದು ನಿನಗೆ ಧರ್ಮವೆ ಇಂದಿರೇಶ ||ಪ|| ಬದಿಗ ನೀನಾಗಿದ್ದು ಭೀತಿಪಡಿಸುವುದು ||ಅ.ಪ|| ನಿನ್ನ ಗುಣಗಳ ತುತಿಸಿ ನಿನ್ನದೇ ಹಾರೈಸಿ ನಿನ್ನವರ ಪ್ರೀತಿಯನು ಸಂಪಾದಿಸಿ ಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವ ಮಾನವನ ಈ ಪರಿಯ ಬನ್ನಬಡಿಸುವದು ||೧|| ದುರುಳನಲ್ಲವೊ ನಿನ್ನ ಚರಣ ಸೇವಕರವನೊ ಪರಿಪಾಲಿಪುದು ನಿನಗೆ ಪರಮಧರ್ಮ ಗುರುಗಳಂತರ್ಯಾಮಿ ಕರಮುಗಿದು ಬಿನ್ನೈಪೆ ಶರಣಪಾಲಕನೆಂಬ ಬಿರುದು ಸುಳ್ಳಾಗುತಿದೆ ||೨|| ಶೋಕನಾಶಕ ವಿಗತಶೋಕನೆಂಬೋ ನಾಮ ನಾ ಕೇಳಿ ಮೊರೆಹೊಕ್ಕೆ ಲೋಕಬಂಧು ನಿರಾಕರಿಸದೆಮ್ಮನು ಸಾಕಬೇಕನುದಿನವು ವಾಕು ಮನ್ನಿಪುದು ಲೋಕೈಕ ರಕ್ಷಾಮಣಿ||೩|| ಗುಣವೆ ನಿನಗಿದು ಬರಿದೆ ದಣಿಸುವುದು ಶರಣರನು ಪ್ರಣತಾರ್ತಿಹರ ವಿಭೀಷಣ ಪಾಲಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ರಥವನೇರಿದ ರಥಿಕನ್ಯಾರೆ

--------ರಾಗ ಮಧ್ಯಮಾವತಿ (ರೇಗುಪ್ತಿ)(ಸಾರಂಗ) ಆದಿತಾಳ(ಧುಮಾಳಿ) ರಥವನೇರಿದ ರಥಿಕನ್ಯಾರೆ ಪೇಳಮ್ಮಯ್ಯ ||ಪ|| ಕಥಿತದ್ಯಾತ ಸಂಸ್ತುತ ವಿತತಾನತ ಹಿತಕರದಿ ವಿಷಸೃತಿ ಕಾಣಮ್ಮ||ಅ.ಪ|| ಹಾಟಕರತ್ನ ಸುಪೀಠ ಮಧ್ಯಮಂಟಪದಿ ನೋಡಮ್ಮಯ್ಯ ತಾಟಂಕಯುತ ವಧೂಟಿಯರಿಕ್ಕೆಲದಿ ನೋಡಮ್ಮಯ್ಯ ಕೋಟಿಭಾಸ್ಕರ ಪ್ರಭಾಲೋಪದಿ ರಾಜಿಸುವ ನೋಡಮ್ಮಯ್ಯ ಆಟದಿ ಕುರುಜ ಮಹಾಟವಿ ಸವರಿ ಕಿ- ರೀಟಿಯ ಸಲಹಿದ ಖೇಟವಾಹನನೆ ||೧|| ಭುಜಗರಾಜ ಫಣಮಂಡಲ ಮಂಡಿತನೆ ನೋಡಮ್ಮಯ್ಯ ವಿಜಯದರಾರಿಗದಾಂಬುಜ ಕರಭೂಷಿತನೆ ನೋಡಮ್ಮಯ್ಯ ಗಜಚರ್ಮಧರಾದ್ಯ ನಿಮಿಷಗಣ ಸೇವಿತನೆ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸ್ಠೆಪೇಳ್ದ ನಿರಜ ಕಾಣಮ್ಮ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಲು ರಮ್ಯವಾಗಿದೆ ಹರಿಯ ಮಂಚ

---ರಾಗ ಕಾಂಬೋಧಿ (ಮಾಲಕಂಸ) ಝಂಪೆತಾಳ ಬಲು ರಮ್ಯವಾಗಿದೆ ಹರಿಯ ಮಂಚ||ಪ|| ಯಲರುಣಿ ಕುಲರಾಜ ರಾಜೇಶ್ವರನ ಮಂಚ ||ಅ.ಪ|| ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧|| ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಿಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಾಡಿದ ಮಂಚ ತಾಲ ಮುಸಲ ಹಲವ ಹಿಡಿದಿರುವ ಮಂಚ ||೨|| ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸರುದ್ರನನು ಪಡೆದ ಮಂಚ ಭೀಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ ||೩|| ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತಿಸಿ ಹಿಗ್ಗುವ ಮಂಚ ದೇವಕೀಜಠರದಲಿ ಜನಿಸಿದ ಮಂಚ ||೪||
ದಾಸ ಸಾಹಿತ್ಯ ಪ್ರಕಾರ
ಬರೆದವರು