ಜಗನ್ನಾಥದಾಸ

ಅನಘನೆಂದೊಮ್ಮೆ ನೆನೆದ ಮಾನವ

ಅನಘನೆಂದೊಮ್ಮೆ ನೆನೆದ ಮಾನವ ಪಾಪ-
ವನದಿ ದಾಟುವ ಬಹುವೇಗದಿಂದ
ಜನನ ಮರಣ ಭಯವಿನಿತಿಲ್ಲ ಅವನೇ
ಸಜ್ಜನ ಶಿರೋಮಣಿ ಕಾಣೋ  ಸರ್ವರೊಳು
ಜನಕ  ಜನನಿ ಮೊದಲಾದ ನೂರೊಂದು ಕುಲವ
ಪಾವನ ಮಾಡುವನು ಪ್ರತಿದಿನದಲಿ
ವನಿತಾದಿ ವಿಷಯಂಗಳನುಭವಿಸುತ  ತನ್ನ
ಮನೆಯೊಳಿರಲವ ಜೀವನ್ಮುಕ್ತನೋ
ಸನಕಾದಿಮುನಿಗಳ  ಮನಕೆ ನಿಲುಕದಿಪ್ಪ
ಘನಮಹಿಮನೇ ಬಂದು ಕುಣಿವ ಮುಂದೆ
ಹನುಮವಂದಿತ ಜಗನ್ನಾಥವಿಠಲರೇಯ
ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ

--ಜಗನ್ನಾಥದಾಸರು



ದಾಸ ಸಾಹಿತ್ಯ ಪ್ರಕಾರ
ಬರೆದವರು

ಇಂದುಶೇಖರ ಶಿವ ನಂದಿವಾಹನ

ಇಂದುಶೇಖರ ಶಿವ ನಂದಿವಾಹನ ಶೂಲಿ
ಸ್ಕಂದಗಣಪರ ತಾತ ದಂದಶೂಕಕಲಾಪ
ಮಂದಾಕಿನೀಧರ ಪುರಂದರಮುಖಸುರ-
ವೃಂದವಿನುತಪಾದದಿಂದ ಶೋಭಿತ ದೇವ
ಕಂದುಕಂಧರ ತ್ರಿಪುರಸಂದೋಹಹರ ಹರ
ವಂದಿಸಿ ಬೇಡುವೆ ಫಲ ಸಂದೇಹಮಾಡದಲಿತ್ತು
ನಂದ ನೀಡುವಿ ನೀನೆಂದು ನಿನ್ನಯ ಬಳಿಗೆ
ಬಂದೆನ್ನ ಮನೋರಥ ಇಂದು ಪೂರ್ತಿ ಸೋ ಗುರೋ
ಗಂಧವಾಹನತನಯ ಇಂದಿರಾಪತಿ ಗುರುಜಗನ್ನಾಥವಿಠಲಾ -
ನಂದಬಡುವನಿದಕೆ  ಸಂದೇಹ ಇನಿತಿಲ್ಲ
 
---ಜಗನ್ನಾಥದಾಸರು

ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರು ವಂದಿಸಲೇನು ಆರು ನಿಂದಿಸಲೇನು?

ಆರು ವಂದಿಸಲೇನು ಆರು ನಿಂದಿಸಲೇನು ಆರು ಶಾಪಿಸಲೇನು ಆರು ಕೋಪಿಸಲೇನು ಆರು ಮುನಿದು ಮಾತನಾಡದಿದ್ದರೆ ಏನು ಮಾರುತಾಂತರ್ಯಾಮಿ ಜಗನ್ನಾಥವಿಠಲನ ಕಾರುಣ್ಯಪಾತ್ರರ ಕರುಣವೆನ್ನೊಳಗಿರೆ ಆರು ವಂದಿಸಲೇನು ಆರು ನಿಂದಿಸಲೇನು ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ಮಧ್ವಾಂತರ್ಗತ ವೇದವ್ಯಾಸಾ

----ರಾಗ-ಮಧ್ಯಮಾವತಿ (ದರ್ಬಾರಿ ಕಾನಡಾ) ಆದಿತಾಳ ಮಧ್ವಾಂತರ್ಗತ ವೇದವ್ಯಾಸಾ , ಮಮ ಹೃದ್ವನರುಹ ಸನ್ನಿವಾಸ ||ಪ|| ಸದ್ಬುದ್ಧಿಯನೆ ಕೊಡು ಶ್ರೀಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತತ್ಪಾದದ್ವಯಾಬ್ಜವ ತೋರೋ ||ಅ.ಪ|| ಹರಿತೋಪಲಾಭ ಶರೀರ ಮುನಿಪರಾಶರವರ ಸುಕುಮಾರ ಪರಮಪುರುಷ ಕರ್ತ ಸ್ವರ್ಣಗರ್ಭ ಪ್ರಮುಖ ನಿರ್ಜರ ಮುನಿಗಣನುತ ಪದಪಂಕಜ ಕುಲಕುಲದಿ ಧೃತರಾಷ್ಟ್ರ ಪಾಂಡುವಿದುರರ ಪಡೆದೈವರಿಗೊಲಿದು ಸಂ- ಹರಿಸಿ ದುರ್ಯೋಧನನ ಭಾರತ ವಿರಚಿಸಿದ ಸುಧೀಂದ್ರ ಕವೀಂದ್ರ ||೧|| ಬಾದರಾಯಣ ಬಹುರೂಪ ಸನಕಾದಿ ಸನ್ನುತ ಧರ್ಮಯೂಪಾ ವೇದೋದ್ಧಾರನಾದ ಅನಾದಿಕರ್ತ ಪೂರ್ಣಬೋಧ ಸದ್ಗುರುವರಾರಾಧಿಪದಯುಗ ಮೇದಿನಿಯೊಳಗೋರ್ವ ಪರಮಾಧಮ ಕೈಪಿಡಿಯೇ ಕರುಣ ಮಹೋ- ದಧಿಯೆ ಕಮನೀಯ ಕಪಿಲಪ್ರಬೋಧ ಮುದ್ರಾ-ಭಯಂಕರಾಂಬುಜ ||೨||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಸ್ಮರಿಸು ಸಂತತ ಹರಿಯನು

--ರಾಗ ಮಧ್ಯಮಾವತಿ (ಭೂಪ್) ಝಂಪೆತಾಳ ಸ್ಮರಿಸು ಸಂತತ ಹರಿಯನು ಮನವೆ ||ಪ|| ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ ಸರಸಿಯೊಳಗಂದು ಕರಿಯ ನರನ ಸಂ- ಗರದೊಳಗೆ ಕಾಯ್ದುದರಿಯ ಜಪ ಮ ವ್ರತ ದಾನ ತಪಕೆ ದೊರೆಯ ಜಗದೀಶ ಶರಣು ಪೊಕ್ಕವರ ತೊರೆಯ ಖರೆಯ ||ಅ.ಪ|| ತಾನೆ ಇಹಪರ ಸೌಖ್ಯ ದಾಸಿಗಳರಸನೆಂದು ಸಾನುರಾಗದಿ ನಂಬಿದ ಜನಕೆ ಸುರ- ಧೇನುವಂದದಲಿ ಮೋದಸಲಿಸುವ ಮ- ಹಾನಂದ ಪೂರ್ಣಬೋಧ ಪ್ರತಿಸಾಮ- ಗಾನಲೋಲ ಪ್ರಸಾದ-ಪಾದ ||೧|| ಎಲ್ಲೆಲ್ಲಿ ನೋಡೆ ಮತ್ತಲ್ಲಲ್ಲೆ ನೆಲೆಸಿಹನು ಬಲ್ಲಿದನು ಭಾಗ್ಯವಂತ ನಂಬಿದರಿ- ಗಲ್ಲದೆ ಒಲಿಯ ಭ್ರಾಂತ-ದುಷ್ಟ ಜನ- ರೊಲ್ಲ ನಿಶ್ಚಯ ಮಹಂತರೊಡೆಯ ಕೈ- ವಲ್ಯದಾಯಕನ ಇಂಥ-ಪಂಥ ||೨|| ನೋಡಿ ನೋಡಿಸುತಿಹನು ಮಾಡಿ ಮಾಡಿಸುತಿಹನು ನೀಡಿ ನೀಡಿಸುವ ಪಿಡಿವ ಪಿಡಿಸುವನು ಬೇಡಿ ಭೇಡಿಸುವ ಬಡವರೊಡೆಯ ಕೊಂ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧವೆಣಿಸದಲೆ ಕಾಯಬೇಕು

ರಾಗ - ಕಾಂಬೋಧಿ(ಬಾಗೇಶ್ರೀ) ಝಂಪೆತಾಳ ಅಪರಾಧವೆಣಿಸದಲೆ ಕಾಯಬೇಕು ||ಪ|| ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||ಅ.ಪ|| ನೀ ಮಾಡಿದುಪಕಾರ ನಾ ಮರೆವುದೆಂತೊ ಲ- ಕ್ಷ್ಮೀಮನೋಹರನ ನಿಜ ದಾಸಾಗ್ರಣಿ ಪಾಮರ ಲೋಕದೊಳು ಧೀಮಂತನೆನಿಸಿದೆ ಮ- ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದು ||೧|| ಅವಿನೀತ ನಾನು ನಿನ್ನವನೆಂದು ತಿಳಿದು ಎ- ನ್ನವಗುಣಗಳೆಣಿಸದಲೆ ನಿತ್ಯದಲ್ಲಿ ಸುವಿವೇಕಿಯನು ಮಾಡು ಕವಿರಾಜ ತವ ಮನೋ- ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||೨|| ಏನೂ ಅರಿಯದ ಮೂಢ ಮಾನವನು ನಾನು ಸು- ಜ್ಞಾನಿವರ್ಯನು ನೀನೇ ಕಾಯಬೇಕು || ಮಾನನಿಧಿ ಜಗನ್ನಾಥವಿಠಲನ ಪದಯುಗಳ ಧ್ಯಾನ ಮಾಡುವ ಧೀರ ಪ್ರಾಣ ಪಂಚಕರಾಯ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂಧನವ ಪರಿಹರಿಸು ಭಯವಿದೂರ

------ರಾಗ -ಕಾಂಬೋಧಿ ಝಂಪೆತಾಳ ಬಂಧನವ ಪರಿಹರಿಸು ಭಯವಿದೂರ ಕಂದರ್ಪಜನಕ ಕಾರುಣ್ಯದಲಿ ಭಕ್ತಜನ ||ಪ|| ದುಷ್ಟಜನರು ಬಲು ಕಷ್ಟಪಡಿಸುವರು ನಿನಗೆಷ್ಟು ಉಸುರಲಿ ಕೇಳು ಜಿಷ್ಣುಸಖನೇ ವೃಷ್ಣೀಶ ನೀ ದಯಾದೃಷ್ಟಿಯಿಂದಲಿ ಈಗ ಹೃಷ್ಟನ್ನ ಮಾಡು ಸಂತುಷ್ಟಿಯಲಿ ಬೇಗ ||೧|| ಹಯಮುಖನೆ ನಿನ್ನವರ ದಯದಿಂದ ಸಲಹುವದು ವಯನಗಮ್ಯನೆ ಜ್ಞಾನತ್ರಯವ ನಿರುತ ಪ್ರಿಯನೆಂದು ನಿನಗೆ ನಾ ದೈನ್ಯದಿಂದಲಿ ಮೊರೆ ಇಡುವೆ ದಯಮಾಡುವದು ನೀನು ಜಯಪ್ರದಾಯಕನಾಗಿ ||೨|| ವೀತಶೋಕನೆ ಎನ್ನ ಮಾತು ಲಾಲಿಸಿ ನಿನ್ನ ದೂತನ್ನ ಸಲಹುವದು ಪ್ರೀತಿಯಿಂದ ದಾತ ಶ್ರೀಗುರು ಜಗನ್ನಾಥವಿಠಲ ನಿನ್ನ ನಾ ತುತಿಸಬಲ್ಲೆನೆ ವಿಧಾತೃಮಖವಂದಿತನೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು