ವ್ಯಾಸತತ್ವಜ್ಞರು

ಆರಿಗೇತರ ಮೊರೆಯನಿಡಲಿ

ಆರಿಗೇತರ ಮೊರೆಯನಿಡಲಿ
ಸಾರಿದವನ ಪೊರೆವ ಶ್ರೀ ರಮಣ ನೀನಿರಲು
ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ
ಅಳತೆಗೆ ಇನ್ನೊಬ್ಬನೇ ಹಾಗೆ
ಒಳಿತಿಗೊಬ್ಬರು ದೊರೆಗಳೇ ಮೇಲೆನ್ನ
ಪ್ರಳಯಕ್ಕೆ ಮತ್ತೊಬ್ಬನೇ ಪರಿಪರಿ
ಖಳರ ಮಾತುಗಳೇ ಸ್ವಾಮಿ
ಆ ಕಾಲದಲಿ ನೀನೆ ಈ ಕಾಲದಲಿ ನೀನೆ
ಸಾಕುವನು ಸ್ಥಿರವಾಗಿ ಇನ್ನೊಬ್ಬನೆ
ತಾಕು ತಗಲಿಲ್ಲದನೆ ಬೊಮ್ಮನೆ ಮೊದಲಾದ
ಲೋಕಪತಿಗಳ ಒಡೆಯನೆ ಈ ವೇಳೆ
ಲೋಕರನು ಕಾಯಬೇಕೋ ಸ್ವಾಮಿ
ಕಾಸು ಒಬ್ಬರಿಗಿಲ್ಲ ಲೇಸು ತೋರದಲೇ
ದೇಶಕೊಬ್ಬರು ಪೋದರೋ ಪೊಟ್ಟಿಗೆ
ಕೂಸುಗಳ ಮಾರುತ್ತ ಲುಂಡರೋ ಆ ಜನರ
ಕ್ಲೇಶಪಡೆಸದಲೆ  ಪೊರೆಯೊ ಕರುಣದಲಿ
ವಾಸುದೇವ ವಿಠಲ ಸ್ವಾಮಿ

 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಳಬ್ಯಾಡೆಲವೋ ರಂಗಮ್ಮ ನಿಮ್ಮ

ಅಳಬ್ಯಾಡೆಲವೋ ರಂಗಮ್ಮ ನಿಮ್ಮ
ಇಳಿಯಾರ ನೋಡುತಿದೆ ಗುಮ್ಮ||ಪ||

ಒದರಿದರೆ ಕೇಳೆಲವೋ ತಮ್ಮಾ, ಅದು
ಅದರುತಿದೆ  ಬೊಮ್ಮಾಂಡ ತಮ್ಮ
ಬೆದರಿ ದಿವಿಜರು ತಮ್ಮತಮ್ಮ , ನಿಜ
ಸದನ ಬಿಡುತಿಹರು ನೋಡಮ್ಮ ||೧||

ಬೆರಳುಗುರು ಗಾಯಗಳಿಂದ ಆ
ದುರುಳರನ್ನ ಜಠರ ತಳದಿಂದ
ಕರುಳು ಮಾಲಿಕೆ ಕಿತ್ತಿ ತಂದ , ತನ್ನ
ಕೊರಳಲಿ ಹಾಕಿಹ ಚಂದ  ||೨||

ಏಸು ದೈತ್ಯರಾಸಿಗಳನು
ತಾನು ಮೋಸಗೊಳಿಸಿ ಕೊಲ್ಲುವನು
ದಾಸನೆಂದರೆ ಕಾಮಧೇನು ಸುಮ್ಮಗಿ-ರುವ
ವಾಸುದೇವ ವಿಟ್ಠಲ ನೀನು ||೩||

 

-- ವ್ಯಾಸತತ್ವಜ್ಞರು



ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ||ಪ||
ಕೃಪಣವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ||ಅ||

ಹುಡುಗರು ಮಾಡುವ ತಪ್ಪಿಗೆ ಜನನಿ ತಾ
ಬಿಡುವಳೆ ಅದರಿಂದ ದಯವ ಮಾಡದಲೆ
ನಡೆವ ಕುದರಿ ತಾನು ಮಲಗಿದಡೆ ಇನ್ನು
ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ ||೧||

ಮಾಡುಯೆಂದದರನು ಬಿಟ್ಟರೆ ಅಪರಾಧ
ಬ್ಯಾಡವೆಂದರಾನು ಮಾಡುವುದಪರಾಧ
ಈಡಿಲ್ಲ ನಿನ್ನ ದಯೆಯೆಂತೆಂದು ನಾನಿಂದು
ಮಾಡುವೆ ಬಿನ್ನಪ ನಾಚಿಕಿಲ್ಲದಲೆ ||೨||

ಬೇಡಿಕೊಂಬೆನೊ ವಾಸುದೇವವಿಠಲ ನೀನು
ನೋಡದಿದ್ದರೆ ಭಕ್ತ ಜನರು ತಮ್ಮ
ಬೀಡು ಸೇರಲೀಸರೊ ಕೇಡೇನೋ ಇದಕಿಂತ
ನೋಡು ನೀ ಇದರಿಂದ ಕೃಪಣ ವತ್ಸಲ ಕೃಷ್ಣ ||೩||

-- ವ್ಯಾಸತತ್ವಜ್ಞರು



 

ದಾಸ ಸಾಹಿತ್ಯ ಪ್ರಕಾರ
ಬರೆದವರು

ಅನಂತಾನಂತ ಪಾಪ ಮಾಡುವೆ ನಾನು

 

ಅನಂತಾನಂತ  ಪಾಪ ಮಾಡುವೆ ನಾನು ||ಪ||
ಅನಂತದಯಾನಿಧೆ ನೀನೋ ಹಯವದನ ||ಅ.ಪ||
 
ಮೇರು ಮಂದರಾದಿಗಳು ದಾರು ಎನ್ನ ಪಾತಕಕ್ಕೆ
ಸರಿಗಾಣಿಸೆನೆಂದರೆ ಪಾಪ ಕ್ಷೋಣಿ ಪರಮಾಣುಗಳಿಗೆ ||೧||
 
ಪೇಳು ಪಾಪವೆಂದೆನಲು ಪೇಳಲಿಕ್ಕೆ ಬಲು ಲಜ್ಜೆ-
ಗಳು ಅಂಡಲೆವುತಿದೆ ತಿಳಿದಾತ ನೀನಲ್ಲವೆ ||೨||
 
ಎನಗೊಂದು ಉಪಾಯವ ಅನಾಯಾಸ ಮಾಡುವಂಥ 
ನಿನ್ನ ನಾಮಸುಧೆಯನ್ನು ಎನಗೀಯೋ ಮುದದಿಂದ ||೩||
 
ಏಸು ಕಾಲ ಸ್ವಾಮಿ ನೀನು ದಾಸನು ಆಸು ಕಾಲದವನು
ವಾಸುದೇವವಿಠಲನೆ  ನೀ ಸಡಲ ಬಿಡುವರೇನೋ ||೪||
 
-- ವ್ಯಾಸತತ್ವಜ್ಞರು
ದಾಸ ಸಾಹಿತ್ಯ ಪ್ರಕಾರ
ಬರೆದವರು