ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ

ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ

( ರಾಗ ಶಂಕರಾಭರಣ ಆದಿತಾಳ) ಹರಿ ಹರಿ ಹರಿಯೆಂದು ಸ್ಮರಿಸುವ ಜನರಿಗೆ ದುರಿತವೆತ್ತಣದು ದುರ್ಗತಿಯೆಲ್ಲಿ ಬಹುದು ||ಪ|| ಸ್ನಾನವೇತಕೆ ಸಂಧ್ಯಾಜಪತಪವೇತಕೆ ಮೌನವೇತಕೆ ಮೇಲೆ ವ್ರತವೇತಕೆ ಮಾನಸದಲಿ ವಿಷ್ಣುಪದ ಧ್ಯಾನಿಸುವ ಮಹಾ- ಜ್ಞಾನಿಗಳ ಸಂಗಸುಖದೊಳಿರ್ಪರಿಗೆ || ಯಾತ್ರೆಯೇತಕೆ ಕ್ಷೇತ್ರತೀರ್ಥಗಳು ಮಾಡಲೇಕೆ ಗೋತ್ರಧರ್ಮದ ಪುಣ್ಯಫಲವೇತಕೆ ಸೂತ್ರದಿಂ ಜಗವ ಮೋಹಿಸುವ ಮುರಾರಿಯ ಸ್ತೋತ್ರದಿಂ ಪೊಗಳಿ ಹಿಗ್ಗುವ ಭಾಗವತರಿಗೆ || ಅಂಗದಂಡನೆಯೇಕೆ ಆತ್ಮಘಾತದ ಒಂದು ತಿಂಗಳ ಚಾಂದ್ರಾಯಣವು ಏತಕೆ ಮಂಗಳಮೂರುತಿ ಪುರಂದರವಿಠಲನ್ನ ಹಿಂಗದೆ ಅರ್ಚನೆ ಮಾಡುವ ಭಕುತರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು