ಹಣ್ಣು ಬಂದಿದೆ ಕೊಳ್ಳಿರೋ

ಹಣ್ಣು ಬಂದಿದೆ ಕೊಳ್ಳಿರೋ

( ರಾಗ ಬಿಲಹರಿ. ಅಟ ತಾಳ) ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ಚೆನ್ನ ಬಾಲಕೃಷ್ಣನೆಂಬೊ ಕನ್ನೆ ಬಾಳೆ ||ಪ|| ಹವ್ಯಕವ್ಯದ ಹಣ್ಣು, ಸವಿ ಸಕ್ಕರೆ ಹಣ್ಣು ಭವರೋಗಗಳನೆಲ್ಲ ಕಳೆವ ಹಣ್ಣು ನವನೀತ ಚೋರನೆಂಬೊ ಜವನ ಅಂಜಿಪ ಹಣ್ಣು ಅವನಿಯೊಳು ಶ್ರೀರಾಮನೆಂಬೊ ಹಣ್ಣು || ಕೊಳೆತು ಹೋಗುವುದಲ್ಲ, ಹುಳುತು ಹೋಗುವುದಲ್ಲ ಕಳೆದು ಬಿಸಾಡಿಸಿಕೊಳ್ಳುವುದಲ್ಲ ಅಳತೆ ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೋದಲ್ಲ ಒಳಿತಾದ ಹರಿಯೆಂಬೊ ಮಾವಿನ ಹಣ್ಣು || ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ ಕಷ್ಟದಿ ಹಣ ಕೊಟ್ಟು ಕೊಂಬುವುದಲ್ಲ ಸೃಷ್ಟಿಯೊಳಗೆ ನಮ್ಮ ಪುರಂದರವಿಟ್ಠಲ ಕೃಷ್ಣರಾಯನೆಂಬೊ ಶ್ರೇಷ್ಠಾದ ಹಣ್ಣು ||
ದಾಸ ಸಾಹಿತ್ಯ ಪ್ರಕಾರ
ಬರೆದವರು