ಹಣ್ಣಿನಂತೆ ಲಕ್ಷಣ ಇರಬೇಕು

ಹಣ್ಣಿನಂತೆ ಲಕ್ಷಣ ಇರಬೇಕು

( ರಾಗ ಶಂಕರಾಭರಣ. ಛಾಪು ತಾಳ) ಹಣ್ಣಿನಂತೆ ಲಕ್ಷಣ ಇರಬೇಕು, ಬಾಳೇ- ಹಣ್ಣಿನ ರುಚಿಯಂತೆ ಗುಣವಿರಬೇಕು ||ಪ|| ಒಡಲನೆ ಕಟ್ಟಿ ಒಬ್ಬರಿಗಿಡಬೇಕು ಸುಡುಗಾಡಿಗಳ ಮಾತು ನೀ ಮರೆಯಲುಬೇಕು ನೋಡಿದರೆ ನೋಡಲಿಲ್ಲೆಂಬುದಿರಬೇಕು ನಡತೆಗುಣದಲಿ ಪಾರ್ವತಿಸಮವಿರಬೇಕು || ಗತಿಯು ತನಗೆ ಪ್ರಾಣಪತಿಯೆನಬೇಕು ಪ್ರತಿಅರುಂಧತಿ ಈಕೆ ಎನಿಸಬೇಕು ಯತಿಗುರುಹಿರಿಯರಿಗೆರಗಿ ಸುಖಿಸಬೇಕು ಅತಿಶಯ ಸಮುದ್ರಗಾಂಭೀರ್ಯವಿರಬೇಕು || ಪರತತ್ವ ಭಾವವ ತಿಳಿದಿರಬೇಕು ಹರಿಪರದೇವತೆಯಧೀನ ಇರಬೇಕು ವರಲಕ್ಷ್ಮಿಯಂದದಿ ದಯವಿರಬೇಕು ಪುರಂದರವಿಠಲ ಮೆಚ್ಚಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು