ಸುಮ್ಮನೆ ಬಾಹೋದೆ ಮುಕ್ತಿ

ಸುಮ್ಮನೆ ಬಾಹೋದೆ ಮುಕ್ತಿ

-- ರಾಗ ಧನ್ಯಾಸಿ ಅಷ್ಟತಾಳ ಸುಮ್ಮನೆ ಬಾಹೋದೆ ಮುಕ್ತಿ ||ಪ|| ಮನದಲ್ಲಿ ದೃಢವಿರಬೇಕು , ಕೋಪ ಮನದ ಸಂಸಾರವ ನೀಡಾಡಬೇಕು ಅನುಮಾನವನು ಬಿಡಬೇಕು, ತನ್ನ ತನುವನ್ನು ಧರ್ಮಕೊಪ್ಪಿಸಿ ಕೊಡಬೇಕು ||೧|| ಪಾಪಿ ಕೋಪವ ಬಿಡಬೇಕು , ಅಲ್ಲಿ ಗೋಪಾಲ ಕೃಷ್ಣನ್ನ ಪೂಜಿಸಬೇಕು ತಾಪರಹಿತನಾಗಬೇಕು ತನ್ನ ಪಾಪವನು ಕಳೆವ ಗುರುವ ನಂಬಬೇಕು ||೨|| ಶರೀರದಾಸೆಯ ಬಿಡಬೇಕು ತನ್ನ ಶರೀರ ಅನಿತ್ಯ ಎನಲುಬೇಕು ಪರದ ಇಷ್ಟಾರ್ಥಗಳು ಬೇಕು , ಹರಿ- ಪುರಂದರ ವಿಠ್ಠಲನ್ನ ನಂಬಲು ಬೇಕು ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು