ಸಾಧು ಜನರ ಸಂಗವ ಮಾಡಿ

ಸಾಧು ಜನರ ಸಂಗವ ಮಾಡಿ

(ರಾಗ ಕಾಂಭೋಜ ಛಾಪುತಾಳ) ಸಾಧು ಜನರ ಸಂಗವ ಮಾಡಿ ಒಂದಾಧಾರವಾದ ಕಲಿತೆ ||ಪ|| ಸಾಧು ಜನರ ಸಂಗ ಬಿಟ್ಟು ಅಜ್ಞಾನದಪತ್ತಿಗೆ ಕಲೆತೆ ||ಅ|| ಆಸೆಯೆಂಬೋ ಮಾವಗೆ ನಾನು ಗ್ರಾಸ ಹಾಕದೆ ಕೊಂದೆನಪ್ಪ ಮೋಸದ ಆರು ಮೈದುನರ ದೇಶಾಂತರದಿ ಓಡಿಸಿದೆನು || ಚಿತ್ತವೆಂಬೋ ಅತ್ತಿಗೆಯ ಎತ್ತೋ ಏನೋ ಓಡಿಸಿದೆ , ದು- ಶ್ಚಿತ್ತವೆಂಬೊ ಅತ್ತೆಯ ಕಣ್ಣು ಮತ್ತೆ ನಾನೇ ಕಳೆದೆನಪ್ಪ || ಹರಿದ್ವೇಷವೆಂಬೊ ಕೂಸಿನ ಉರುಳು ಹಾಕಿ ಕೊಂದೆನಪ್ಪ ಪುರಂದರವಿಠಲನೆಂಬೊ ಸರಸಗಂಡನ ಕೂಡಿದೆನಪ್ಪ ||
ದಾಸ ಸಾಹಿತ್ಯ ಪ್ರಕಾರ
ಬರೆದವರು