ಸಾಗರಗಡೆಯ ಮಾಡಿ

ಸಾಗರಗಡೆಯ ಮಾಡಿ

ಸಾಗರಗಡೆಯ ಮಾಡಿ ಧರೆಯ ಕೂರಿಗೆ ಮಾಡಿ | ಹರಬ್ರಹ್ಮರೆಂಬೊ ಎರಡೆತ್ತು ಹೂಡಿ | ನರರೆಂಬೊ ಬೀಜವ ಬಿತ್ತಿ ಧರೆಯೊಳಗೆ | ಇಂದ್ರ ಬೆಳೆಸುವಾತ ಚಂದ್ರ ಕಳೆ ಕೀಳಿಸುವಾತ | ಯಮರಾಯನಯ್ಯ ಬಿತ್ತಿದ ಬೆಳಸೆಲ್ಲ | ಎತ್ತಿಕೊಂಡು ಹೋದಾಗ | ದುಃಖ ಪಡಬೇಡೆಂದನು ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ