ಶಿವದರುಶನ ನಮಗಾಯಿತು

ಶಿವದರುಶನ ನಮಗಾಯಿತು

ರಾಗ: ಮಧ್ಯಮಾವತಿ/ಆದಿ ತಾಳ ಶಿವದರುಶನ ನಮಗಾಯಿತು ಕೇಳಿ ಶಿವರಾತ್ರಿಯ ಜಾಗರಣೆ || ಪಲ್ಲವಿ || ಪಾತಾಳಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು || ೧ || ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು ಆಡುತ ಪಾಡುತ ಏರುತ ಬಸವನ ಆನಂದದಲಿ ನಲಿದಾಡುವನು || ೨ || ಹರನನು ಕಂಡೆನು ಪುರಂದರವಿಠಲನ ಹರಿನಾರಾಯಣನ ಧ್ಯಾನದಲಿ || ೩ || ~~~ * ~~~ ಜ್ಯೋತಿರ್ಲಿಂಗ - ಪಂಚತತ್ವಗಳಿಗೆ ಅನುಗುಣವಾಗಿ ಪಂಚಲಿಂಗಗಳನ್ನು ಹೇಳುವ ಪ್ರಕ್ರಿಯೆಯಿದೆ. ’ಜ್ಯೋತಿರ್ಲಿಂಗ’ ಅಗ್ನಿತತ್ವವನ್ನು ಪ್ರತಿನಿಧಿಸುತ್ತದೆ. ದ್ಯೂತಗಳಿಲ್ಲ - ಹೆಣಗಾಟವಿಲ್ಲ. ಬ್ರಹ್ಮನ ರಾಣಿಯ ನೋಡುವನು - ರುದ್ರನು ಐದನೆಯ ಕಕ್ಷೆಯಲ್ಲಿದ್ದು, ತನ್ನ ಮೇಲಿನ ಕಕ್ಷೆಯಲ್ಲಿ ಉತ್ತಮಳಾದ ಸರಸ್ವತಿಯನ್ನು ಸನ್ನಿಧಾನಪೇಕ್ಷೆಯಿಂದ ನೋಡುವನು. ರುದ್ರನಿಗೆ ಸರಸ್ವತಿಯ ಮೂಲಕವಾಗಿ ಬ್ರಹ್ಮ, ಬ್ರಹ್ಮನ ಮೂಲಕವಾಗಿ ಲಕ್ಷ್ಮಿ, ಲಕ್ಷ್ಮಿಯ ಮೂಲಕವಾಗಿ ವಿಷ್ಣುವಿನ ಸೇವೆ ಸಿದ್ಧವಾಗುತ್ತದೆ. [ಪುರಂದರ ಸಾಹಿತ್ಯ ದರ್ಶನ - ಸಂಪುಟ ೨]
ದಾಸ ಸಾಹಿತ್ಯ ಪ್ರಕಾರ
ಬರೆದವರು