ವರುಷ ಕಾರಣವಲ್ಲ ಹರಿ ಭಜನೆಗೆ

ವರುಷ ಕಾರಣವಲ್ಲ ಹರಿ ಭಜನೆಗೆ

( ರಾಗ ಕಾಂಭೋಜ ಅಟತಾಳ) ವರುಷ ಕಾರಣವಲ್ಲ ಹರಿ ಭಜನೆಗೆ ||ಪ|| ಅರಿತು ತತ್ವಜ್ಞರು ಕೇಳಿ ಸನ್ಮುದದಿ ||ಅ|| ತರಳತನದಲಿ ಕಂಡ ಹರಿಯ ಧ್ರುವರಾಯನು ಹಿರಿಯತಾನವನಪ್ಪ ಕಂಡನೇನೋ ತರಳ ಪ್ರಹ್ಲಾದನು ನರಹರಿಯ ತಾ ಕಂಡ ಹಿರಿಯನವನಪ್ಪ ತಾ ಮರೆಯಲಿಲ್ಲೇನೋ || ಹಿರಿದಾಗಿ ಬಹುಕಾಲ ಮರದ ಮೇಲೆ ಬಾಳುವ ಇರುಳು ಗಣ್ಣಿನ ಗೂಬೆ ತಾ ದೊಡ್ಡದೆ ಮರಿಯಾದ ಅರಗಿಣಿಯು ಹರಿ ಕೃಷ್ಣ ಎಂದೊದರೆ ಮರಿ ದೊಡ್ಡದೆಂತೆಂದು ಪೇಳುವರು ಜನರು || ಸರುವದಾ ಒದರುವರು ಅರಣ್ಯವಾಸಿಗಳು ಮರದಡಿಗೆ ಬಿದ್ದ ಎಲೆಗಳ ತಿನ್ನುತ ಪರಮ ಪಾತಕಿ ಅಜಾಮಿಳನು ನಾರಗ ಎನಲು ಭರದಿಂದ ಸಲಹಿದನು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು