ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ

ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ

(ಭೈರವಿ ರಾಗ ರೂಪಕ ತಾಳ) ವಂದನೆ ಮಾಡಿರೈ ಯತಿಕುಲಚಂದ್ರನ ಪಾಡಿರೈ ||ಪ|| ಬಂದ ದುರಿತಗಳ ಕಳೆದು ಆ- ನಂದಪಡುವ ವಿಭುದೇಂದ್ರ ಕರೋದ್ಭವರ ||ಅ.ಪ|| ರಘುಕುಲ ವರಪುತ್ರ ರಾಮನ ಚರಣ ಕರುಣಾಪಾತ್ರ ನಿಗಮೋಕ್ತಿಯ ಸೂತ್ರಫಾರ ಪ್ರವಚನರತ ಸುಗುಣಜಿತಾಮಿತ್ರ ನಗಧರ ಶ್ರೀ ಪನ್ನಗಶಯನನ ಗುಣ ಪೊಗಳುವ ಅಪಾರ ಅಗಣಿತ ಮಹಿಮರ ||೧|| ವರಮಹಾತ್ಮೆ ತಿಳಿಸಿ ಮೊದಲಿಂ ಧರೆ ಆನಂದದಿ ಚರಿಸಿ ನಿರುತ ಮನವ ನಿಲಿಸಿ ಶ್ರೀಹರಿ ಕರಿವರದನ ಒಲಿಸಿ ಧರೆಜನರಿಗೆ ಅರಿಯದೆ ಮರೆಯಾಗುತ ಹರುಷದಿ ಗೋನದತರುವಲ್ಲಿರುವವರ ||೨|| ಮುದದಿ ಕೃಷ್ಣಾತಟಿಯ ಮಧ್ಯದಿ ಸದನದ ಪರಿಯ ಸದಮಲ ಯತಿವರ್ಯ ತಪಮೌನದಲಿದ್ದುದನರಿಯ ಒದಗಿ ನದಿಯು ಸೂಸುತ ಬರಲೇಳುದಿನ ಕುದಯಾದವರ ಸುಪದಕಮಲಂಗಳ ||೩|| ಮಾಸಮಾರ್ಗಶೀರ್ಷಾರಾಧನೆಗಶೇಷ ದಿನ ಅಮಾ- ವಾಸ್ಯ ದಾಸರು ಪ್ರತಿವರುಷ ಮಾಳ್ಪರು ಲೇಸೆನಲು ಶ್ರುತಿಘೋಷ ಕಾಶಿ ಕ್ಷೇತ್ರಕೆ ಈ ಸ್ಥಳ ಮಿಗಿಲೈ ದಾಸಜನಕೆ ಭೂರುಹ ಯತಿಪದಗಳ ||೪|| ಮಧ್ವಮತ ಗ್ರಂಥಸಾರದ ಪದ್ಧತಿ ತಿಳಿದಂಥ ಅದ್ವೈತಪಂಥ ಮುರಿದು ಮತ ಉದ್ಧರಿಸಿದಂಥ ರುದ್ರವಂದ್ಯಮೂರುತಿ ರಂಗವಿಠಲನ ಪದ- ಪದ್ಮಾರಾಧಕ ಪ್ರಸಿದ್ಧ ಮುನೀಂದ್ರರ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು