ಮಂಗಳ ಗುರು ರಾಘವೇಂದ್ರಗೆ ಜಯ

ಮಂಗಳ ಗುರು ರಾಘವೇಂದ್ರಗೆ ಜಯ

( ರಾಗ - ನಾದನಾಮಕ್ರಿಯೆ ( ಭೈರವಿ) ಅಟತಾಳ(ಕಹರವಾ) ) ಮಂಗಳ ಗುರು ರಾಘವೇಂದ್ರಗೆ ಜಯ ||ಪ|| ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ|| ಶ್ರೀಸುಧೀಂದ್ರಕುಮಾರಗೆ ಮಂಗಳ ಭೂಸುರನುತ ಮಹಿಮಗೆ ಮಂಗಳ ದೇಶಿಕ ಕುಲವನಜಾರ್ಕಗೆ ಮಂಗಳ ಭಾಸುರ ಕೀರ್ತಿಯ ಪಡೆದವಗೆ ||೧|| ವೃಂದಾವನಭುವಿಯೊಳಗೆ ಸುರದ್ರುಮ- ದಂದದಿ ರಾಜಿಸುವಗೆ ಮಂಗಳ ಅಂಧ ಪಂಗು ಮೂಕ ಬಧಿರರ ಈಪ್ಸಿತ ಸಂದೋಹ ಸಲಿಸುವ ಮುನಿವರಗೆ ||೨|| ಭೂತಪ್ರೇತಬೇತಾಳ ಭಯವಿಪಿನ ವೀತಿಹೋತ್ರನೆನಿಪಗೆ ಮಂಗಳ ವಾತಜನುತ ಜಗನ್ನಾಥವಿಠಲನ ದೂತರ ಸಲಹುವ ದಾತನಿಗೆ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು