ಪಾಲಿಸೋ ಜಗದೀಶ ಅನುದಿನಂ

ಪಾಲಿಸೋ ಜಗದೀಶ ಅನುದಿನಂ

(ರಾಗ ಶ್ರೀರಾಗ ಆದಿತಾಳ) ಪಾಲಿಸೋ ಜಗದೀಶ ಅನುದಿನಂ ಪಾಲಿಸೋ ಜಗದೀಶ ||ಪ|| ಮಂದಬುದ್ಧಿಯಲಿ ಸುದತೀಜನರ ಸೇರಿ ಕಂದಿದೆನೋ ದೇವಾ ಕಾಯೊ ಮುರಾರಿ ಇಂದು ಕೈಯ ಬಿಡುವುದು ಉಚಿತವೆ ಶೌರಿ , ನೀ ತಂದೆ ಗತಿಯು ಎನಗಾರು ವಿಹಾರಿ ||೧|| ಭಕ್ತರ ಪೊರೆಯುವಂಥ ಬಿರುದೆಲೋ ನಿನಗೆ ಭಕ್ತನೆಲೋ ನಾನು ನಿನ್ನ ಪದಗಳಿಗೆ ಯುಕ್ತರ ಸಂಗಗಳಿಗೆ ಸೇರಿಸೋ ಎನಗೆ ತಿಕ್ತವೇನೋ ನಾನು ನಿನ್ನ ನಾಲಿಗೆಗೆ ||೨|| ವೈಕುಂಠಪುರದೊಡೆಯ ಎನ್ನ ಕಾಯುವುದು ಲೋಕಪಾಲಕನಿಗೆ ಕಷ್ಟವೇನಿಹುದು ನೂಕಿಬಿಟ್ಟರೆ ಎನ್ನ ನೀತಿಯಾಗುವುದೇ ಸಾಕಬೇಕು ನೀ ಸುಮನೆ ಇರದೆ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು