ಪಾಪೋಸು ಹೋದುವಲ್ಲ ಸ್ವಾಮಿ

ಪಾಪೋಸು ಹೋದುವಲ್ಲ ಸ್ವಾಮಿ

( ರಾಗ ಶಂಕರಾಭರಣ. ಆದಿ ತಾಳ / ರಾಗ ಮಧ್ಯಮವತಿ ಅಟತಾಳ) ಪಾಪೋಸು ಹೋದುವಲ್ಲ ಸ್ವಾಮಿ ಎನ್ನ ||ಪ|| ಅಪಾರ ದಿನಗಳಿಂದ ಆರ್ಜನೆ ಮಾಡಿದ ||ಅ|| ಉರಗಾದ್ರಿಯಲಿ ಸ್ವಾಮಿ ಪುಷ್ಕರಣಿ ಮೊದಲಾದ ಪರಿಪರಿ ತೀರ್ಥಸ್ನಾನಗಳ ಮಾಡಿ ಹರಿದಾಸರ ಕೂಡಿ ಗಿರಿರಾಯನ ಮೂರ್ತಿ ದರುಶನದಲಿ ಮೈ ಮರೆತಿರಲು ಎನ್ನ || ಪರಮಭಾಗವತರು ಹರಿಕಥೆ ಪೇಳಲು ಪರಮಭಕುತಿಯಿಂದ ಕೇಳುತಿರೆ ಪರಮಪಾಪಿಗಳ ಪಾಲಾಗಿ ಪೋದುವು ಪರಮಪುರುಷನ ಮನಸಿಗೆ ಬಂದೀಗ || ಮಾಯಾದೇವಿ ಎನಗೆ ಮೆಚ್ಚಿ ಕೊಟ್ಟಿದ್ದಳು ದಾಯಾದಿಗಳು ನೋಡಿ ಸಹಿಸಲಿಲ್ಲ ಮಾಯಾರಮಣ ನಮ್ಮ ಪುರಂದರವಿಠಲನ ಮಾಯದಿಂದಲಿ ಮಟ್ಟ ಮಾಯವಾದವು ಎನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು