ದಾಸರಾಯ ಪುರಂದರದಾಸರಾಯ

ದಾಸರಾಯ ಪುರಂದರದಾಸರಾಯ

-----ರಾಗ-ಸಾವೇರಿ(ಭೈರವಿ) ಅಟತಾಳ (ದೀಪಚಂದಿ) ದಾಸರಾಯ ಪುರಂದರದಾಸರಾಯ ||ಪ|| ದಾಸರಾಯ ಪ್ರತಿದಾಸರದಲಿ ಶ್ರೀನಿ- ವಾಸನ ತೋರೊ ದಯಾಸಾಂದ್ರ ಪುರಂದರ ||ಅ.ಪ|| ವರದನಾಮಕ ಭೂಮಿಸುರನ ಮಡದಿ ಬ- ಸುರಲಿ ಜನಿಸಿ ಬಂದು ಮೆರೆದೆ ಧರಣಿಯೊಳು ||೧|| ಕುಲಿಶಧರಾಹ್ವಯ ಪೊಳಲೊಳು ಮಡದಿ ಮ- ಕ್ಕಳ ಕೂಡೆ ಸುಖದಿ ಕೆಲವು ಕಾಲದೊಳಿದ್ಯೊ ||೨|| ವ್ಯಾಸರಾಯರಲಿ ಭಾಸುರ ಮಂತ್ರೋಪ- ದೇಶವ ಕೊಂಡು ರಮೇಶನ ಭಜಿಸಿದೆ ||೩|| ಮನೆ ಧನ ಧಾನ್ಯ ವಾಹನ ವಸ್ತುಗಳೆಲ್ಲ ತೃಣಕೆ ಬಗೆದು ಕೃಷ್ಣಾರ್ಪಣವೆಂದೆ ಬುಧರಿಗೆ ||೪|| ಪ್ರಾಕೃತಭಾಷೆಯೋಳ್ ನೀ ಕೃತಿ ಪೇಳಿ ಆ ಪ್ರಾಕೃತಹರಿಯಿಂದೆ ಸ್ವೀಕೃತನಾದೆ ||೫|| ತೀರ್ಥಕ್ಷೇತ್ರಗಳ ಮೂರ್ತಿ ಮಹಿಮೆಗಳ ಕೀರ್ತಿಸಿ ಜಗದಿ ಕೃತಾರ್ಥನೆಂದೆನಿಸಿದೆ ||೬|| ಪಾತಕ ವನನಿಧಿ ಪೋತನೆನಿಪ ಜಗ- ನ್ನಾಥವಿಠಲನ ಪ್ರೀತಿಯಿಂದೊಲಿಸಿದೆ ||೭||
ದಾಸ ಸಾಹಿತ್ಯ ಪ್ರಕಾರ
ಬರೆದವರು