ತಾರಕವಿದು ಹರಿಕಥಾಮೃತ

ತಾರಕವಿದು ಹರಿಕಥಾಮೃತ

( ರಾಗ- ಪಂತುವರಾಳಿ(ಭೈರವಿ) ರೂಪಕತಾಳ(ದಾದರಾ) ) ತಾರಕವಿದು ಹರಿಕಥಾಮೃತ , ಸಾರಜನಕೆ ಘೋರತರ ಅಸಾರಸಂಸಾರವೆಂಬ ಶರಧಿಗೆ ನವತಾರಕ ||ಪ|| ಶ್ವಾನಸೂಕರಾದಿ ನೀಚಯೋನಿಗಳಲ್ಲಿ ಬಂದು ನೊಂದು ವೈನತೇಯವಾಹನ ಸನ್ನಿಧಾನ ಬೇಕು ಎಂಬವಗೆ ||೧|| ಪ್ರಿಯವಸ್ತುಗಳೊಳು ಪಾಂಡವರ ಸಖನೆ ಎಮಗೆ ಬ್ರಹ್ಮ ವಾಯು ಉಚ್ಚಸುರರು ತಂದೆತಾಯಿ ಎಂದರಿತವರಿಗೆ ||೨|| ಶ್ರೀ ಮುಕುಂದ ಸರ್ವ ಮಮ ಸ್ವಾಮಿ ಅಂತ- ರಾತ್ಮ ಪರಂಧಾಮ ದೀನಬಂಧು ಪುಣ್ಯನಾಮವೆಂದರಿತವರಿಗೆ ||೩|| ಜ್ಞೇಯಜ್ಞಾನಜ್ಞಾತೃ ಬಾದರಾಯಣಾಖ್ಯ ಹರಿಯ ವಚನ ಕಯ ಮನದಿ ಮಾಡ್ದ ಕರ್ಮ ಶ್ರೀಯರಸನಿಗೀವ ನರಗೆ ||೪|| ಭೂತ ಭವ್ಯ ಭವತ್ಪ್ರಭು ಅನಾಥಜನರ ಬಂಧು ಜಗ- ನ್ನಾಥವಿಠಲ ಪಾಹಿಯೆಂದು ಮಾತು ಮಾತಿಗೆಂಬುವರಿಗೆ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು