ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು

ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು

---ರಾಗ ಭೂಪ ತಾಳ -ದೀಪಚಂದಿ ಗುರುಭಕುತಿಯಲಿ ಮನವು ಸ್ಥಿರಗೊಳ್ಳಲಿಬೇಕು | ಅರಿತು ಸದ್ಭಾವದಲಿ ಧೃಡಗೊಳ್ಳಬೇಕು || ಪ|| ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು | ನಿಶ್ಚಿಂತದಲಿ ನಿಜಸುಖ ಪಡಿಯಬೇಕು ||೧|| ನಂಬಿ ನಡಿಯಬೇಕು ಡಂಭಕವ ಬಿಡಬೇಕು | ಹಂಬಲಿಸಿ ಅಂಬುಜಾಕ್ಷನ ನೋಡಬೇಕು ||೨|| ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು | ವಿಶ್ವವ್ಯಾಪಕನ ವಿಶ್ವದಿ ನೋಡಬೇಕು ||೩|| ರತಿಪ್ರೇಮ ಬಿಡಬೇಕು ಅತಿ ಹರುಷಪಡಬೇಕು | ಸ್ತುತಿಸ್ತವನವನು ಪಾಡಿ ಗತಿ ಪಡಿಯಬೇಕು ||೪|| ಆರು ಜರಿಯಬೇಕು ಮೂರು ಹರಿಯಬೇಕು | ಅರಿತು ಗುರುಪಾದ ಮಹಿಪತಿ ಬೆರಿಯಬೇಕು ||೫|| ----------- ರಚನೆ- ಮಹಿಪತಿದಾಸರು
ದಾಸ ಸಾಹಿತ್ಯ ಪ್ರಕಾರ
ಬರೆದವರು