ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು

ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು

(ನೀಲಾಂಬರಿ ರಾಗ ರೂಪಕ ತಾಳ) ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು ಎಲ್ಲವನ್ನು ಉಂಡು ತೀರಿಸಬೇಕು ಮನವೆ ||ಪ|| ತಂದೆ ತಾಯಿಯ ಬಸಿರಿನಲ್ಲಿ ಬಂದ ಅಂದಂದಿಗೂ ಒಂದಿಷ್ಟು ಸುಖವ ನಾ ಕಾಣೆ ಜೀವನವೆ ಬಂದದ್ದನೆಲ್ಲವನ್ನು ಉಂಡು ತೀರಿಸಬೇಕು, ಭ್ರಮೆ- ಯಿಂದ ಮನವೆ ನಿನಗೆ ಬಯಲಾಸೆ ಯಾಕೋ ||೧|| ಎಮ್ಮ ಅರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬ ಹಮ್ಮು ನಿನಗೆ ಏಕೋ ಹಗೆಯ ಜೀವನವೆ ಬ್ರಹ್ಮನು ಫಣೆಯಲ್ಲಿ ಬರೆದ ಬರಹ ತಪ್ಪುವುದುಂಟೆ ಸುಮ್ಮನೆ ಬಯಲಾಸೆ ವ್ಯರ್ಥ ಜೀವನವೆ ||೨|| ಅಂತರಂಗದಲ್ಲೊಂದು ಅರ್ಧ ದೇಹದಲ್ಲೊಂದು ಚಿಂತೆಗನುಗೊಳಲೇಕೆ ಪಂಚೈವರಿರಲು ಕಂತುಪಿತ ಕಾಗಿನೆಲೆ ಆದಿಕೇಶವರಾಯ ಲಕ್ಷ್ಮೀ- ಕಾಂತ ನಮ್ಮನಲ್ಲಿಗೆ ಕರೆಕಳುಹುವ ತನಕ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು