ಒಪ್ಪಿಸಸಲ್ಲದೊ ಎನ್ನೊಡೆಯನಾಗಿ

ಒಪ್ಪಿಸಸಲ್ಲದೊ ಎನ್ನೊಡೆಯನಾಗಿ

( ರಾಗ ಶಂಕರಾಭರಣ ಛಾಪು ತಾಳ) ಒಪ್ಪಿಸಸಲ್ಲದೊ ಎನ್ನೊಡೆಯನಾಗಿ, ಎನ್ನ ತಪ್ಪುಗಳ ಕಾಯಬೇಕು ಅಪಾರಮಹಿಮನೆ ||ಪ|| ಅರಿಷಡ್ವರ್ಗಗಳೆಲ್ಲ ಅವರೊಳಗಿದ್ದು ಪರಿಪರಿಯಿಂದ ಎನ್ನ ಬಾಧಿಸುತಲಿದೆ ಪರರ ಕೈ ಕೊಟ್ಟರಿನ್ನು ಪಾಲಿಪರಾರಯ್ಯ ದುರಿತಾದುರಿತಗಳ ಪರಿಹರಿಸಯ್ಯ || ಜೀವ ನಿನ್ನದು ಎಂದು ಜಿತನಾಗಿ ಮನದಲ್ಲಿ ಭಾವಜನಯ್ಯ ಎನ್ನ ಪಾಲಿಸಬೇಕೊ ಧಾವತಿ ಪಡುವೆನೆ ದಯ ಮಾಡೋ ಶ್ರೀಹರೇ ಎ- ನ್ನಾವ ಜನ್ಮದಲೆನ್ನ ಆಳಿದವನಲ್ಲವೆ || ನಿನ್ನವನಲ್ಲವೆ ನಾನು ಎನ್ನವನಲ್ಲವೆ ನೀನು ಘನ್ನ ಮಹಿಮನೆ ಪಾಲಿಸಬೇಕೈ ಇನ್ನು ಮಾಡೋದು ಚೆನ್ನಲ್ಲ ಪುರಂದರವಿಠಲ ಸನ್ಮಾನದಿಂದಲಿ ಎನ್ನನು ಸಲಹಬೇಕೈ ||
ದಾಸ ಸಾಹಿತ್ಯ ಪ್ರಕಾರ
ಬರೆದವರು