ಏನು ಬಂದ್ಯೋ ಜೀವವೇ ವ್ಯರ್ಥವಾಗಿ

ಏನು ಬಂದ್ಯೋ ಜೀವವೇ ವ್ಯರ್ಥವಾಗಿ

( ರಾಗ ಕೇದಾರಗೌಳ. ಅಟ ತಾಳ) ಏನು ಬಂದ್ಯೋ ಜೀವವೇ ವ್ಯರ್ಥವಾಗಿ ಜ್ಞಾನದಿಂದಲಿ ತಿಳಿದು ಪರಗತಿಯನು ಕೂಡು ||ಪ|| ದಾನವ ಮಾಡಲಿಲ್ಲ ಧರ್ಮವ ಮಾಡಲಿಲ್ಲ ದೀನನುಡಿಗಳಿಲ್ಲ ದಾಕ್ಷಿಣ್ಯವಿಲ್ಲ ಜ್ಞಾನಿ ದಾಸ ಜನರಾ ಸಂಗದೊಳಿರಲಿಲ್ಲ ಮನ ನಿರ್ಮಲದಿ ಕ್ಷಣವು ಇರಲಿಲ್ಲ || ಸತಿಪುರುಷರಾಗಿ ಸಂತೋಷದಿಂದಿರಲಿಲ್ಲ ಯತಿಯಾಗಿ ತೀರ್ಥಯಾತ್ರೆಯ ಮಾಡಲಿಲ್ಲ ಶ್ರುತಿ ಪುರಾಣಗಳನ್ನು ಕಿವಿಗೊಟ್ಟು ಕೇಳಲಿಲ್ಲ ಮೃತಿಕಾಲ ಬಂದು ದಿನ ವ್ಯರ್ಥ ಹೋಯಿತಲ್ಲ || ಉಂಡುಟ್ಟು ಸುಖವಿಲ್ಲ ಕಾಯ ಪರಿಣಾಮವಿಲ್ಲ ಕೊಂಡು ಕೊಟ್ಟು ಪರಸೇವೆ ಬಿಡಲಿಲ್ಲ ದಂದುಗಳ ಸಂಸಾರ ಮಾಯಾಪಾಶಕೊಳಗಾದೆ ತಂದೆ ಶ್ರೀ ಪುರಂದರ ವಿಠಲನ ನೆನೆ ಕಂಡ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು