ಏಕೆ ದೂರುವಿರೇ ರಂಗಯ್ಯನ

ಏಕೆ ದೂರುವಿರೇ ರಂಗಯ್ಯನ

(ಕಲ್ಯಾಣಿ ರಾಗ ಅಟ್ಟತಾಳ/ ತ್ರಿಪುಟ ತಾಳ) ಏಕೆ ದೂರುವಿರೇ ರಂಗಯ್ಯನ ಏಕೆ ದೂರುವಿರೇ ||ಪ|| ಸಾಕು ನಿಮ್ಮ ದೂರ ಬಲ್ಲೆನು ಈ ಕುವರನಾ ಕೃತ್ಯ ಮಾಳ್ಪನೆ ||ಅ.ಪ|| ದಟ್ಟಡಿಯಿಡಲರಿಯ ಗೋವತ್ಸವ ಬಿಟ್ಟು ಚಲಿಸಬಲ್ಲನೆ ಘಟ್ಟಿಯಾಗಿ ಗೊತ್ತಿನಲ್ಲಿ ಕಟ್ಟಿನೊಳು ಕಟ್ಟಿದ್ದ ಕರುಗಳ ಬಿಟ್ಟನೇ ಈಕೃಷ್ಣನ ಮೇ- ಲೆಷ್ಟು ಹೊಟ್ಟೆಕಿಚ್ಚೆ ನಿಮಗೆ ||೧|| ಕೆನೆಹಾಲು ಬೆಣ್ಣೆಯನು ಇತ್ತರೆ ಆ ದಿನವೊಲ್ಲನು ಊಟವ ಮನೆಮನೆಗಳನು ಪೊಕ್ಕು ಬೆಣ್ಣೆ ಪಾಲ್ಮೊಸರನ್ನು ತಿನ್ನುತ ವನಿತೆಯರ ಕೂಡಾಡಿದನೆಂ- ದೆನಲು ನಿಮಗೆ ನಾಚಿಕಿಲ್ಲವೆ ||೨|| ಪಾಲು ಮೊಸರು ಬೆಣ್ಣೆಯು ಇಲ್ಲವೆ ನ- ಮ್ಮಾಲಯದೊಳು ನೋಡಿರೆ ಹೇಳುವರೆ ಈ‌ ಠೌಳಿಗಳ ಗೋ- ಪಾಲಬಾಲನ ನೋಡಿ ಸೈಸದೆ ಬಾಳುವಿರ ಭವ ಜಲಧಿಯಿಂದಲಿ ತೇಲಿಸುವನೆ ರಂಗವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು