ಏಕೆ ದಯ ಬಾರದೋ

ಏಕೆ ದಯ ಬಾರದೋ

(ರಾಗ ಭೈರವಿ ಆದಿ ತಾಳ) ಏಕೆ ದಯ ಬಾರದೋ ಲೋಕನಾಯಕ ನಿನಗೇಕೆ ||ಪ|| ಇಂದಿರೇಶ ನಿಮ್ಮ ಪಾದ- ದ್ವಂದ್ವವ ನಂಬಿದೆನಯ್ಯ ಬಂದು ಸಲಹೊ ಬೇಗದಿಂದ ನಂದಗೋಪನ ಕಂದ ನಿನಗೆ || ಸೃಷ್ಟಿಯೊಳಗೆ ನಿನಗೆ ಎ- ಳ್ಳಷ್ಟು ಕರುಣ ಬಾರದೇಕೊ ಸಿಟ್ಟೇಕೊ ಎನ್ನ ಮೇಲೆ ಮುಷ್ಟಿಮರ್ದನ ಕೃಷ್ಣ ನಿನಗೆ || ಅಷ್ಟಮ ಸ್ತ್ರೀಯರ ಪತಿಯೆ ಎನ್ನ ಕಷ್ಟವ ಪರಿಹರಿಸೊ ಮುನ್ನ ಬೆಟ್ಟಲಿ ಬೆಟ್ಟವನೆತ್ತಿದ ದಿಟ್ಟ ಶ್ರೀ ಗೋಪಾಲ ನಿನಗೆ || ವಾಸುಕಿಶಯನ ಎನ್ನ ದೋಷವ ಪರಿಹರಿಸೊ ಇನ್ನು ದಾಸ್ಯವಿತ್ತು ನೋಡೊ ಅಂಜನಾ- ದ್ರೀಶ ಶ್ರೀನಿವಾಸ ನಿನಗೆ || ಅರವಿಂದಾಕ್ಷ ನೀನೆ ಎನಗೆ ಸರುವ ಬಳಗ ಬಂಧು ಭಾಗ್ಯ ಅರಿಯ ಪರಾಕ್ರಮವ ಬೇಗೆ ಪುರಂದರವಿಠಲ ನಿನಗೆ||
ದಾಸ ಸಾಹಿತ್ಯ ಪ್ರಕಾರ
ಬರೆದವರು