ಏಕೆ ಚಿಂತಿಸುವೆ

ಏಕೆ ಚಿಂತಿಸುವೆ

( ರಾಗ ನೀಲಾಂಬರಿ. ಮಟ್ಟೆ ತಾಳ) ಏಕೆ ಚಿಂತಿಸುವೆ ಬರಿದೆ ಮರುಳೆ ||ಪ|| ವಿಧಿ ಬರೆದ ವಾಕು ತಪ್ಪದು ಎಂದಿಗೂ ಮರುಳೆ ||ಅ|| ಹುಟ್ಟುವುದಕಿಂತ ಮೊದಲೆ ತಾಯ ಸ್ತನ ದಿಟ್ಟ ಕ್ಷೀರವನು ಉಂಡು ತೊಟ್ಟಿಲೊಳು ಮಲಗುವಾಗ ಗಳಿಸಿ ತಂ- ದಿಟ್ಟು ನೀನುಣುತಿದ್ದೆಯೊ ಮರುಳೆ || ಉರಗ ವೃಶ್ಚಿಕ ಪಾವಕ ಕರಿ ನಂಜು ಅರಸು ಹುಲಿ ಚೋರ ಭಯವು ಹರಿಯಾಜ್ಞೆಯಿಂದಲೇವೇ ನೀನು ಮಹಾ ಶರಧಿ ಪೊಕ್ಕರು ಬಿಡದು ಮರುಳೆ || ಇಂತು ಸುಖ ದುಃಖಂಗಳಿಗೆ ಸಿಲುಕಿ ನೀ ಭ್ರಾಂತನಾಗಿ ಕೆಡಲು ಬೇಡ ಸಂತೋಷದಿಂದರ್ಚಿಸಿ ಪೂಜಿಸು ಕಂತುಪಿತ ಶ್ರೀ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು