ಏಕೆ ಚಿಂತಿಪೆ ಬರಿದೆ ನೀ

ಏಕೆ ಚಿಂತಿಪೆ ಬರಿದೆ ನೀ

(ರಾಗ ಖರಹರಪ್ರಿಯ ಛಾಪು ತಾಳ) ಏಕೆ ಚಿಂತಿಪೆ ಬರಿದೆ ನೀ , ವಿಧಿ ಬರೆದ ವಾಕು ತಪ್ಪದು ಪಣೆಯೊಳು , ಮರುಳೆ ||ಪ|| ಹುಟ್ಟಲಿಕೆ ಮೊದಲೆ ತಾಯ ಮೊಲೆಯೊಳಗೆ ಇಟ್ಟಿದ್ದಿಯೋ ಕ್ಷೀರವ ತೊಟ್ಟಿಲೊಳು ಮಲಗುವಾಗ , ಗಳಿಸಿ ನೀ ಇಟ್ಟುಕೊಂಡುಣುತಿದ್ದೆಯ, ಮರುಳೆ || ಉರಗ ವೃಶ್ಚಿಕ ಪಾವಕ , ಹುಲಿ ಸಿಂಹ ಕರಿಯರಸು ಚೋರಭಯವು ಹರಿಯಾಜ್ಞೆಯಿಂದಲ್ಲದೆ , ಇವು ಇನ್ನು ಶರಧಿ ಪೊಕ್ಕರು ಬಿಡುವುವೆ || ಇಂತು ಸುಖ ದುಃಖಗಳಲಿ , ಬಳಲಿ ನೀ ಭ್ರಾಂತನಾಗಲು ಬೇಡವೊ ಸಂತೋಷದಿಂದರ್ಚಿಸಿ , ಭಜಿಸು ನಿ- ಶ್ಚಿಂತ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು