ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ

ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ

(ರಾಗ ತೋಡಿ ಛಾಪುತಾಳ) ಎಲ್ಲ್ಯಾಡಿ ಓಡಿ ಬಂದ್ಯೋ ಗೋವಿಂದ ||ಪ|| ಚೆಲುವ ಫುಲ್ಲಲೋಚನ ಮದನ ಗೋಪಾಲಕೃಷ್ಣ ||ಅ|| ಆಡಿ ಬಂದ್ಯೊ ಮಕ್ಕಳೊಡನೆ ಕೈಲಿ ಚೆಂಡು ಬೇಡ ಬಂದ್ಯೊ , ದುಷ್ಕೃತದ ಬಂಧನ ಭವ ದೂಡ ಬಂದ್ಯೊ , ಭಕ್ತಜನಕೆ ಅಭಯಹಸ್ತ ನೀಡಬಂದ್ಯೊ , ನಿನ್ನ ಎಳೆ ಉಗುರು ಮುಖಕಾಂತಿ ಬಾಡಿದವು ಕೃಷ್ಣ || ತುಳಿದು ಬಂದ್ಯೊ ವಿಷದ ಕಾಳಿಂಗನಾಗನ ಇಳುಹಿ ಬಂದ್ಯೊ ತಾಳಮರಂಗಳನಂಬಿನಲ್ಲಿ ಕಳುಹಿ ಬಂದ್ಯೊ ಬಾಣಮುಖದಿಂದ ವಾಲಿಯ ತಿಳಿದು ಬಂದ್ಯೊ ಮುನೀಶ್ವರರ ನಿನ್ನ ಜಡೆಯ ಆಭರಣ ಸಡಲಿದುವು ಕೃಷ್ಣ || ಉಂಡು ಬಂದ್ಯೊ ಮಕ್ಕಳೊಡನೆ ಕೈಲಿ ಬುತ್ತಿ ಕೊಂಡು ಬಂದ್ಯೊ ಮಲ್ಲ ರಕ್ಕಸರ ಮಸ್ತಕ ಚೆಂಡಾಡಿ ಬಂದ್ಯೊ ಪೂತನಿಯ ಕಾಯುವನು ಪುಂಡರೀಕಾಕ್ಷ ಪೇಳೆನಗೆ ಈ ಭಂಡತನ ಬೇಡ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು