ಎಚ್ಚರಿಕೆ ಎಚ್ಚರಿಕೆ ಮನವೆ

ಎಚ್ಚರಿಕೆ ಎಚ್ಚರಿಕೆ ಮನವೆ

(ರಾಗ ಯದುಕುಲಕಾಂಭೋಜ ಅಟತಾಳ) ಎಚ್ಚರಿಕೆ ಎಚ್ಚರಿಕೆ ಮನವೆ ||ಪ|| ಅಚ್ಯುತನ ಪಾದಾರವಿಂದ ಧ್ಯಾನದಲಿ ||ಅ|| ತೊಗಲುಚೀಲೊಂಭತ್ತು ಹರಕು , ಬಹು ಬಿಗಿದ ನರಗಳು ಎಲುವುಗಳ ಸಿಲುಕು ಮಿಗೆ ರಕ್ತಮಾಂಸದ ಹೊಳಕು, ಒ- ಳಗೆ ಕಫ ವಾತ ಪಿತ್ತದ ಸರಕು || ಆಶೆ ಪಾಶದೊಳಗೆ ಸಿಲುಕಿ, ಬಹು- ಕ್ಲೇಶ ಪಟ್ಟೆ ತುಚ್ಛ ಸುಖಕೆ ಅಳುಕಿ ಹೇಸಿ ಸಂಸಾರದಲಿ ಸಿಲುಕಿ , ಮಾಯ- ಕ್ಲೇಶವೆಂಬುದು ಕೇಳಿ ಮೈಮರೆತು ಸೊಕ್ಕಿ || ಕಣ್ಣುಗಳಿಗವಕಾಶ ಕೊಟ್ಟು , ಪರ- ಹೆಣ್ಣುಗಳ ನೀ ನೋಡಿ ಮೈಮರೆತು ಕೆಟ್ಟು ಪುಣ್ಯದಾ ಹಾದಿಗಳ ಬಿಟ್ಟು , ಅಂತ- ಕನ್ನ ಯಾತನದಿ ನೀ ಕಷ್ಟಪಟ್ಟು || ಕರಣಗಳಿಗವಕಾಶ ಕೊಟ್ಟು , ಹಾಳು ಹರಟೆಗಳಿಗೆ ನೀ ಮೈಮರೆತು ಕೆಟ್ಟು ಹರಿಯ ನಾಮಗಳನ್ನೆ ಬಿಟ್ಟು , ಮಹಾ ನರಕಬಾಧೆಗೆ ನೀ ಮೈಯ ಕೊಟ್ಟು || ಹಣ ಹೆಣ್ಣು ಮಣ್ಣಾಸೆ ವ್ಯರ್ಥ , ಈ ತನುವಿಗೆ ಯಮಪುರದ ಪಯಣವೆ ನಿತ್ಯ ಉಣಿಸು ತೃಷಾದಿಗಳು ಮಿಥ್ಯ , ಅಂತ- ಕನ ಯಾತನೆಗೆ ಹರಿನಾಮ ಪಥ್ಯ || ದುಷ್ಟರ ಸಹವಾಸಹೀನ , ಬಲು ಶಿಷ್ಟರ ಸಂಗವೆ ಪರಕೆ ಬಹುಮಾನ ಎಷ್ಟು ಓದಿದರಷ್ಟು ಜ್ಞಾನ , ಬರೆ ಶ್ರೇಷ್ಠ ಭಕುತಿ ಮಾಡುವುದೆ ಸಾಧನ || ನಾಲಿಗೆ ಹರಿ ಬಿಡಬೇಡ , ತಿಂಡಿ ಪಾಲಲೋಲ ರುಚಿಪಾಕಗಳೆಣಿಸಬೇಡ ಹಾಳು ಮಾತುಗಳಾಡಬೇಡ ಸಿರಿ ಪುರಂದರವಿಠಲನ ಬಿಡಬೇಡ ||
ದಾಸ ಸಾಹಿತ್ಯ ಪ್ರಕಾರ
ಬರೆದವರು