ಇಂದು ಎನ್ನ ಜನುಮ ಸಾಫಲ್ಯವಾಯಿತು

ಇಂದು ಎನ್ನ ಜನುಮ ಸಾಫಲ್ಯವಾಯಿತು

(ಭೈರವಿ ರಾಗ ದಾದರಾ ತಾಳ) ಇಂದು ಎನ್ನ ಜನುಮ ಸಾಫಲ್ಯವಾಯಿತು ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ||ಧ್ರುವ|| ಭಾನುಕೋಟಿ ತೇಜವಾಗಿ ರೂಪುದೋರಿತು ತಾನೆ ತನ್ನಿಂದೊಲಿದು ದಯವ ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬುವ ಅಹಂಭಾವ ಹರಿಯಿತು ||೧|| ಎಂದು ಇಂದಿರೇಶನ ಕಾಣದ ಕಣ್ಣುದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯಗರೆಯಿತು ಹೊಂದಿ ಹರುಷಪಡುವಾನಂದ ಪಥವುದೋರಿತು ||೨|| ಭಿನ್ನವಿಲ್ಲದೆ ಸಹಸ್ರದಳದಲ್ಯಾಡುವ ಹಂಸನ ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯ ಜೀವನ ಧನ್ಯಗೈಸಿತು ಮಹಿಪತಿ ಪ್ರಾಣಜೀವನ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು