ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ

ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ

(ರಾಗ ಕಾಂಭೋಜ ಝಂಪೆತಾಳ) ಇಂತು ಶ್ರುತಿಸ್ಮೃತಿಗಳಲಿ ಸಾರುತಿದೆ ಕೋ ||ಪ|| ಕಂತುಪಿತನ ಗುಣಗಳನು ತಿಳಿಯಬೇಕು ||ಅ|| ಮನವ ಸಿರಿನರಹರಿಯ ಚರಣಕರ್ಪಿಸಬೇಕು ತನುವ ತೊಂಡರಿಗಡ್ಡ ಕೆಡಹಬೇಕು ಮಾತೆಯರ ಚೆಲುವಿಕೆಗೆ ಮರುಳಾಗದಿರಬೇಕು ಘನತೆಯಲಿ ಹರಿಚರಣ ಸ್ಮರಿಸುತಿರಬೇಕು || ಕಂದರ್ಪನಟ್ಟುಳಿಗೆ ಕಳವಳಿಸದಿರಬೇಕು ಇಂದ್ರಿಯಂಗಳನು ನಿಗ್ರಹಿಸಬೇಕು ಚಂದಲೀಲೆಗಳಿಗೆ ಮನವೊಲಿಸದಿರಬೇಕು ಇಂದಿರೇಶನ ಪದದ ಪಥವನರಿಯಬೇಕು || ಒಂಟಿಯಲಿ ಮುನಿಗಳಾಶ್ರಮದಿ ನೆಲಸಲುಬೇಕು ಹೆಂಟೆ ಬಂಗಾರ ಸಮ ಎಂದು ತಿಳಿಯಬೇಕು ಕಂಟಕರ ಭಯಗಳನು ನೀಗುತ್ತಲಿರಬೇಕು ನಂಟ ಪುರಂದರವಿಠಲನೊಲಿಸಲುಬೇಕು ||
ದಾಸ ಸಾಹಿತ್ಯ ಪ್ರಕಾರ
ಬರೆದವರು