ಆ ರಣಾಗ್ರದಿ ಭೀಮಗಡ್ಡೈಪರಾರು

ಆ ರಣಾಗ್ರದಿ ಭೀಮಗಡ್ಡೈಪರಾರು

ಆ ರಣಾಗ್ರದಿ ಭೀಮಗಡ್ಡೈಪರಾರು ? ವಾರಿಧಿ ಮೇರೆದಪ್ಪಲು ನಿಲ್ಲಿಸುವರಾರು ? || ನಾನಾ ದೇಶದ ಭೂನಾಯಕರಿದ್ದರಲ್ಲವೆ ? ತಾನು ದುಶ್ಶಾಸನನು ತತ್ತರಿಸುವಾಗ ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆ ? ಆನೆಯ ಕೈಯ ಕಬ್ಬಿಗೆ ಅಂಗಯಿಸುವವರಾರು ? || ಘುಡು ಘುಡುಗುಡಿಸುತ ರಾಯ ಕುರುಪತಿಯನು ಕೆಡಹಿ ತೊಡೆಗಳನು ಗದೆಯಿಂದ ತುಂಡಿಸುವಾಗ ಕಡುಕೋಪದವ ಹಲಧರನೇನು ಮಾಡಿದ ? ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ ? || ಸಂದಿಗೆ ಸಾವಿರ ಸಿಂಹ ಸತ್ವದ ಕೀಚಕನ ಕೊಂದು ಬಿಸುಡುವಾಗ ಮುಂಕೊಂಡವರುಂಟೇ ಚಂದದಿ ಪುರಂದರವಿಠಲನ ದಾಸರು ಮನ- ದಂದಕೆ ಬಂದಂತೆ ನಡೆದುದೇ ಮಾರ್ಗ ||
ದಾಸ ಸಾಹಿತ್ಯ ಪ್ರಕಾರ
ಬರೆದವರು