ಆವ ಭೂತ ಬಡಕೊಂಡಿತೆಲೊ ನಿನಗೆ

ಆವ ಭೂತ ಬಡಕೊಂಡಿತೆಲೊ ನಿನಗೆ

ಆವ ಭೂತ ಬಡಕೊಂಡಿತೆಲೊ ನಿನಗೆ
ದೇವ ಕೇಶವನಂಘ್ರಿ ಧ್ಯಾಸವ ಮರೆತೆ ||ಪ||

ಸತಿಸುತರ ಮಮತೆಂಬ ವ್ಯಥೆ ಭೂತ ಬಡಿಯಿತೆ
ಅತಿವಿಷಯಲಂಪಟದ ದುರ್ಮತಿಭೂತ ಹಿಡಿಯಿತೆ
ಅತಿಸಿರಿಯ ಭೂತ ನಿನ್ನ ಮತಿಗೆಡಿಸಿತೇನೆಲೂ
ರತಿಪತಿಪಿತನಂಘ್ರಿಸ್ತುತಿಯನೆ ಮರೆತಿ ||೧||

ಸೂಳೆಯರ ಗಾಳ್ಯೆಂಬ ಹಾಳುಬವ್ವ ತಾಕಿತೇ
ಕೀಳು ಸಂಸಾರದ ಮಹ ಗೋಳು ಭೂತ್ಹಿಡಿತೇ
ಸಾಲಿಗಳ ಭಯಭೂತ ನಾಲಿಗೆಯ ಸೆಳೆಯಿತೇ
ನೀಲಶಾಮನ ಭಜನ ಫಲವ ಮರೆತ್ಯೆಲ್ಲೊ ||೨||

ಪೋದವಯ ಪೋಯಿತು ಆದದ್ದಾಗ್ಹೋಯಿತು
ಪಾದದಾಸರ ಕೂಡಿ ಶೋಧ ಮಾಡಿನ್ನು
ಭೂಧವ ಶ್ರೀರಾಮನ ಪಾದವನು ನಂಬಿ ಭವ-
ಬಾಧೆ ಗೆಲಿದಿನ್ನು ಮುಕ್ತಿಹಾದಿಯ ಕಾಣೊ ||೩||




 

ದಾಸ ಸಾಹಿತ್ಯ ಪ್ರಕಾರ
ಬರೆದವರು