ಆರಿಗೇತರ ಮೊರೆಯನಿಡಲಿ

ಆರಿಗೇತರ ಮೊರೆಯನಿಡಲಿ

ಆರಿಗೇತರ ಮೊರೆಯನಿಡಲಿ
ಸಾರಿದವನ ಪೊರೆವ ಶ್ರೀ ರಮಣ ನೀನಿರಲು
ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ
ಅಳತೆಗೆ ಇನ್ನೊಬ್ಬನೇ ಹಾಗೆ
ಒಳಿತಿಗೊಬ್ಬರು ದೊರೆಗಳೇ ಮೇಲೆನ್ನ
ಪ್ರಳಯಕ್ಕೆ ಮತ್ತೊಬ್ಬನೇ ಪರಿಪರಿ
ಖಳರ ಮಾತುಗಳೇ ಸ್ವಾಮಿ
ಆ ಕಾಲದಲಿ ನೀನೆ ಈ ಕಾಲದಲಿ ನೀನೆ
ಸಾಕುವನು ಸ್ಥಿರವಾಗಿ ಇನ್ನೊಬ್ಬನೆ
ತಾಕು ತಗಲಿಲ್ಲದನೆ ಬೊಮ್ಮನೆ ಮೊದಲಾದ
ಲೋಕಪತಿಗಳ ಒಡೆಯನೆ ಈ ವೇಳೆ
ಲೋಕರನು ಕಾಯಬೇಕೋ ಸ್ವಾಮಿ
ಕಾಸು ಒಬ್ಬರಿಗಿಲ್ಲ ಲೇಸು ತೋರದಲೇ
ದೇಶಕೊಬ್ಬರು ಪೋದರೋ ಪೊಟ್ಟಿಗೆ
ಕೂಸುಗಳ ಮಾರುತ್ತ ಲುಂಡರೋ ಆ ಜನರ
ಕ್ಲೇಶಪಡೆಸದಲೆ  ಪೊರೆಯೊ ಕರುಣದಲಿ
ವಾಸುದೇವ ವಿಠಲ ಸ್ವಾಮಿ

 

---ವ್ಯಾಸತತ್ವಜ್ಞರು




ದಾಸ ಸಾಹಿತ್ಯ ಪ್ರಕಾರ
ಬರೆದವರು