ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ

ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ

ಅಲ್ಪವೆನಿಸಲಿಬೇಡವನ್ಯರಿಗೆ ಎಲೊ ಹರಿಯೆ
ಕಾಲಿಗೆರಗುವೆನೊ ಕರುಣಾರ್ಣವೇಶ
ಕಾಲದೇಶವ ತೋರಿ ಕಠಿಣಮಾತುಗಳಾಡೆ
ಮೇಲೆ ನಿನ್ನ ಘನತೆಗೆ ಶ್ರೀಧರ
ಮೂಲ ನೀ ಸಕಲ ಕಾರಣಗಳಿಗೆ ಮುಖ್ಯ ತವ
ಆಳಿನಾಳೋ ನಾನು ಅನಿಮಿತ್ತಬಂಧು
ಬಾಲಕರ ಬಳಲಿಸುವ ಬಡಿವಾರವೇನೊ ನಾ
ಕೀಳುಮತಿಯಯ್ಯ ಕಿಂಕರರ ದೊರೆಯೆ
ಸಾಲುಸಾಲಿಗೆ ಶ್ರಮಜಾಲ ತೊಲಗಲು ನಿನ್ನ
ಊಳಿಗಕೆ ಮನವೆರಗುವುದೆ ಕೇಶವ
ಪಾಲಸಾಗರಶಾಯಿ ಪತಿತಪಾವನ ಮಾತ-
ಲಾಲಿಸುವುದುಚಿತ ವಿಶಾಲಚರಿತ
ಬಾಲಗೋಪಾಲ ಶ್ರೀಪತಿವಿಠಲನೆ ನಿನ್ನ
ಪಾಲಿಗೇ ಬಂದ ಪಾಮರದಾಸ ನಾನಯ್ಯ





ದಾಸ ಸಾಹಿತ್ಯ ಪ್ರಕಾರ
ಬರೆದವರು