ಅಬಲೆಯ ಮಾತಿಗೆ ಮನಸು ಕರಗಿತು

ಅಬಲೆಯ ಮಾತಿಗೆ ಮನಸು ಕರಗಿತು

ಅಬಲೆಯ ಮಾತಿಗೆ ಮನಸು ಕರಗಿತು, ನಿನ್ನ
ಅಂಬುಜಪಾದಕೆ ಬಿಡದೆ ಬಿನ್ನೈಸಿದೆ
ಪ್ರಬಲ ನೀನಾದಕಾರಣದಿಂದ ಚನ್ನಾಗಿ
ವಿಭುದೇಶ ನಾನಾರೋಗವಿನಾಶನೇ
ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅನ್ಯ
ವಿಭುಗಳಿಗೆ ಶರಣೆನ್ನೆ ಸರ್ವಕಾಲ
ಶಬದಮಾತುರವಲ್ಲ ಅಂತರಂಗದ ಸ್ತೋತ್ರ
ಕುಬುಜೆಯ ತಿದ್ದಿದ ವಿಜಯವಿಠ್ಠಲರೇಯ
ನಿಬಿಡಕರುಣಾಂಬುಧಿ  ಮಹದುರಿತಾರಿ

--ವಿಜಯದಾಸರು





ದಾಸ ಸಾಹಿತ್ಯ ಪ್ರಕಾರ
ಬರೆದವರು